ADVERTISEMENT

ಕಾಂಗ್ರೆಸ್‌ಗೆ ಸ್ವದೇಶಿ ಚಿಂತನೆ ಇಲ್ಲ: ಕಟೀಲ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 20:18 IST
Last Updated 5 ಸೆಪ್ಟೆಂಬರ್ 2021, 20:18 IST
ಕಟೀಲ್‌
ಕಟೀಲ್‌   

ಮೈಸೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುತ್ತಿರುವ ಕಾಂಗ್ರೆಸ್‌ಗೆ
ಸ್ವದೇಶಿ ಚಿಂತನೆ ಎಂಬುದೇ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಭಾನುವಾರ ಇಲ್ಲಿ ವಾಗ್ದಾಳಿ
ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶದ ಇತಿಹಾಸವನ್ನು ಕಾಂಗ್ರೆಸ್‌ ತಿರುಚಿದೆ. ಮೆಕಾಲೆಯ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿದ ಪರಿಣಾಮ ಸ್ವಾಭಿಮಾನದ ದೇಶ ಕಟ್ಟಲು ಕಾಂಗ್ರೆಸ್‌ಗೆ ಆಗಲಿಲ್ಲ. ವಿದೇಶಿ ಚಿಂತನೆಯಲ್ಲೇ ಬೆಳೆದು
ಬಂದ ಆ ಪಕ್ಷಕ್ಕೆ ಮಾನಸಿಕವಾಗಿ ಸ್ವದೇಶಿ ಚಿಂತನೆ ಇಲ್ಲ’
ಎಂದರು.

‘ದೇಶದ ಒಳಿತಿಗೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಎಲ್ಲಾ ನೀತಿಗಳನ್ನು ವಿರೋಧಿಸುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಅನ್ನೇ ಪ್ರಶ್ನಿಸಿದೆ. ಚೀನಾದ ಆಕ್ರಮಣ ಆದಾಗಲೂ ಕೇಂದ್ರ ಸರ್ಕಾರವನ್ನು ಬೆಂಬಲಿಸಲಿಲ್ಲ’ ಎಂದು ದೂರಿದರು.

ADVERTISEMENT

‘ಹಿಂದಿನ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿವೆ. ಮೋದಿ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.