ADVERTISEMENT

ಮೇಕೆದಾಟು ಪಾದಯಾತ್ರೆಗೆ ಮೈಸೂರಿನಿಂದ ಹೊರಟ ಕಾಂಗ್ರೆಸ್ ಮುಖಂಡರು

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 9:06 IST
Last Updated 11 ಜನವರಿ 2022, 9:06 IST
ಮೇಕೆದಾಟು ಪಾದಯಾತ್ರೆಗೆ ಮೈಸೂರಿನಿಂದ ಹೊರಟ ಕಾಂಗ್ರೆಸ್ ಮುಖಂಡರು
ಮೇಕೆದಾಟು ಪಾದಯಾತ್ರೆಗೆ ಮೈಸೂರಿನಿಂದ ಹೊರಟ ಕಾಂಗ್ರೆಸ್ ಮುಖಂಡರು   

ಮೈಸೂರು: ಮೇಕೆದಾಟು ಪಾದಯಾತ್ರೆಗಾಗಿ ಮೈಸೂರು ಜಿಲ್ಲೆಯಿಂದ ಹೊರಟ ತಂಡಕ್ಕೆ ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ ಮಂಗಳವಾರ ಶುಭ ಹಾರೈಸಿದರು.

ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದ ಅವರು ದೊಡ್ಡ ಗಡಿಯಾರದವರೆಗೂ ಹೆಜ್ಜೆ ಹಾಕಿದರು.

ಶಾಸಕ ಮಂಜುನಾಥ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ ಜೆ. ವಿಜಯಕುಮಾರ್, ಮುಖಂಡರಾದ ವಾಸು, ಆರ್.ಧರ್ಮಸೇನ, ಕಳಲೆ ಕೇಶವಮೂರ್ತಿ ಹಾಗೂ ವಿವಿಧ ಹಂತದ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾದರು.

ADVERTISEMENT

ಈ ವೇಳೆ ಮಾತನಾಡಿದ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, 'ಮೈಸೂರಿನಿಂದ ಸುಮಾರು 8 ಸಾವಿರ ಮಂದಿ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.