ADVERTISEMENT

ಟ್ರಾಕ್ಟರ್‌ ಮಗುಚಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:44 IST
Last Updated 15 ಫೆಬ್ರುವರಿ 2020, 15:44 IST
ಪ್ರವೀಣ್ 
ಪ್ರವೀಣ್    

ಬೆಟ್ಟದಪುರ: ಸಮೀಪದ ಚನ್ನಕೇಶವಪುರ ಗ್ರಾಮದಲ್ಲಿ ಶನಿವಾರ ಮುಂಜಾನೆ ಉಳುಮೆ ಮಾಡುವಾಗ ಟ್ರಾಕ್ಟರ್‌ ಮಗುಚಿಬಿದ್ದ ಪರಿಣಾಮ ಯುವಕ ಕೆ.ಬಿ.ಪ್ರವೀಣ್ (21) ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೊಣಸೂರು ಗ್ರಾಮ ಕೆ.ಬಿ.ಪ್ರವೀಣ್ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಎ ವ್ಯಾಸಂಗ ಮಾಡುತ್ತಿದ್ದ.

ಚನ್ನಕೇಶವಪುರ ಗ್ರಾಮದ ಗದ್ದೆಯಲ್ಲಿ ಶುಂಠಿ ಬೆಳೆಯಲು ಭೂಮಿ ಹದ ಮಾಡುವಾಗ ಗದ್ದೆ ಅಂಚಿಗೆ ಹೋದ ಟ್ರಾಕ್ಟರ್‌ ನೀರು ಹರಿಯುವ ಕೊಲ್ಲಿಗೆ ಮಗುಚಿ ಬಿದ್ದಿದೆ. ಟ್ರಾಕ್ಟರ್‌ ಅಡಿಗೆ ಸಿಲುಕಿದ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ADVERTISEMENT

ಈ ಸಂಬಂಧ ಪ್ರವೀಣ್‌ ತಂದೆ ಬಸವರಾಜು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.