ಮೈಸೂರು: ಇಲ್ಲಿನ ಅಶೋಕಪುರಂನ ನಿವಾಸಿ ಹಾಗೂ ಸಾಮಾಜಿಕ ಹೋರಾಟಗಾರ ಮರಿದಂಡಯ್ಯ ಬುದ್ಧ (57) ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಗಂಗೋತ್ರಿ ಬಡಾವಣೆಯಲ್ಲಿನ ತಮ್ಮ ಸ್ವಗೃಹ ನಿಧನರಾದರು.
ಅವಿವಾಹಿತರಾಗಿದ್ದ ಇವರಿಗೆ ತಾಯಿ ಪುಟ್ಟನಂಜಮ್ಮ ಹಾಗೂ ಮೂವರು ಸೋದರ, ಸೋದರಿಯರು ಇವರಿಗೆ ಇದ್ದಾರೆ.
ಇವರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ನೆರವೇರಿತು.
ಇವರು ತಮ್ಮ 20ನೇ ವಯಸ್ಸಿನಿಂದಲೇ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಸಿಪಿಎಂ (ಲಿಬರೇಷನ್) ಪಕ್ಷದಿಂದ ಮೈಸೂರು ಲೋಕಸಭಾ ಸ್ಥಾನಕ್ಕೂ ಇವರು ಒಮ್ಮೆ ಸ್ಪರ್ಧಿಸಿದ್ದರು. ಮೈಸೂರಿನಲ್ಲಿ ಈಚೆಗೆ ನಡೆದ ದಲಿತಪರವಾದ, ಪೌರಕಾರ್ಮಿಕರ ಪರವಾದ ಹಾಗೂ ಸಿಎಎ ವಿರುದ್ಧದ ಚಳವಳಿಗಳಲ್ಲಿ ಸಕ್ರಿಯವಾಗಿ ಇವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.