ಎಚ್.ಡಿ.ಕೋಟೆ: ತಾಲ್ಲೂಕಿನ ಕಸಬಾ ಹೋಬಳಿ ಚಕ್ಕೋಡನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಬೆಳೆ ನಷ್ಟವಾಗಿದೆ.
ಗ್ರಾಮದ ಟಿ.ಲೋಕೇಶ್ ಅವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಬಾಳೆ, ಜೋಳ ಮತ್ತು ಶುಂಠಿ ಬೆಳೆಯನ್ನು ತುಳಿದು ನಾಶಪಡಿಸಿವೆ.
‘ಸುಮಾರು ಎರಡು ಸಾವಿರ ಬಾಳೆ ಗಿಡಗಳು ಕಟಾವಿಗೆ ಬಂದಿದ್ದವು. ಶುಂಠಿ 3 ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಜಮೀನಿಗೆ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಹಾನಿಮಾಡಿವೆ. ಪಕ್ಕದ ಜಮೀನಿನ ಗುಡಿಸಲನ್ನು ಬೀಳಿಸಿದೆ. ಆನೆಗಳನ್ನು ಓಡಿಸುವುದು ಕಷ್ಟ. ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ’ ಎಂದು ರೈತ ಟಿ.ಲೋಕೇಶ್ ತಿಳಿಸಿದರು.
ಈ ಬಗ್ಗೆ ವೀರನಹೊಸಳ್ಳಿ ವನ್ಯಜೀವಿ ವಲಯದ ಕಚೇರಿಗೆ ದೂರು ಕೊಟ್ಟಿದ್ದು, ವಲಯ ಅರಣ್ಯಾಧಿಕಾರಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.