ಮೈಸೂರು: ಇಲ್ಲಿನ ಸಾತಗಳ್ಳಿ ಬಡಾವಣೆಯ ನಿವಾಸಿ ಹೇಮಲತಾ (48) ಎಂಬಾಕೆ ಸ್ಥಳೀಯ ನಿವಾಸಿಗಳಿಗೆ ಸುಮಾರು ₹ 48 ಲಕ್ಷ ವಂಚಿಸಿರುವ ಕುರಿತು ಇಲ್ಲಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಳೆದ 4 ವರ್ಷಗಳಿಂದ ಇಲ್ಲಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಹಿಳೆಯು ದೇವರು, ಧರ್ಮದ ವಿಚಾರ ಹೇಳುತ್ತ ಸುತ್ತಮುತ್ತಲ ನಿವಾಸಿಗಳ ವಿಶ್ವಾಸ ಗಳಿಸಿದ್ದರು. ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಕೆಲವರಿಂದ ಹಣ ಸಂಗ್ರಹಿಸಿದರೆ ಮತ್ತೆ ಕೆಲವರಿಂದ ಸಾಲವಾಗಿಯೂ ಹಣ ಪಡೆದಿದ್ದರು. ಇಲ್ಲಿಯವರೆಗೆ ಒಟ್ಟು ₹ 48 ಲಕ್ಷದಷ್ಟು ಹಣವನ್ನು ವಂಚಿಸಿರುವ ಕುರಿತು ಮಾಹಿತಿ ದೊರಕಿದೆ. ಪ್ರಕರಣ ದಾಖಲಾಗಿದ್ದು, ಮಹಿಳೆಗಾಗಿ ಶೋಧ ಕಾರ್ಯ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.