ಮೈಸೂರು: ಇಲ್ಲಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನದ ಗಿಣಿಯೊಂದು ಧ್ವಜಾರೋಹಣ ಮಾಡಿರುವ ವಿಡಿಯೊವನ್ನು ಆಶ್ರಮದ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಗಿಣಿಯು ಪುಟ್ಟದಾದ ರಾಷ್ಟ್ರಧ್ವಜವನ್ನು ಆರೋಹಣ ಮಾಡುತ್ತದೆ. ಏಳೆಂಟು ಗಿಣಿಗಳು ಸಾಲಾಗಿ ನಿಲ್ಲುವ ಮೂಲಕ ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತವೆ. ಕೊನೆಯಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ‘ಭಾರತ ಮಾತಾ ಕಿ ಜೈ’ ಎಂದು ಹೇಳುವುದನ್ನು ಗಿಣಿಗಳು ಅನುಕರಿಸುತ್ತವೆ.
ವಿಡಿಯೊವನ್ನು ಫೇಸ್ಬುಕ್ ಖಾತೆ https://www.facebook.com/sgsbirds ತೆರೆಯಿರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.