ADVERTISEMENT

ಮೈಸೂರು | 100 ಸಸಿ ನೆಟ್ಟು ‘ಹಸಿರು ಭಾನುವಾರ’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:16 IST
Last Updated 11 ಆಗಸ್ಟ್ 2024, 16:16 IST
ಅದಮ್ಯ ಚೇತನ ಸಂಸ್ಥೆಯಿಂದ ವಿಜಯನಗರ 4ನೇ ಹಂತ ಬಳಿಯ ಎಸ್‌ಬಿಐ ಆಫೀಸರ್ಸ್‌ ಲೇಔಟ್‌ನಲ್ಲಿ 100 ಸಸಿಗಳನ್ನು ನೆಡಲಾಯಿತು
ಅದಮ್ಯ ಚೇತನ ಸಂಸ್ಥೆಯಿಂದ ವಿಜಯನಗರ 4ನೇ ಹಂತ ಬಳಿಯ ಎಸ್‌ಬಿಐ ಆಫೀಸರ್ಸ್‌ ಲೇಔಟ್‌ನಲ್ಲಿ 100 ಸಸಿಗಳನ್ನು ನೆಡಲಾಯಿತು   

ಮೈಸೂರು: ಕೇಂದ್ರದ ಮಾಜಿ ಸಚಿವ ದಿ. ಅನಂತ್‌ಕುಮಾರ್ ಅವರ ಅದಮ್ಯ ಚೇತನ ಸಂಸ್ಥೆಯಿಂದ ‘ಹಸಿರು ಭಾನುವಾರ – 450ನೇ ಕಾರ್ಯಕ್ರಮ’ದ ಅಂಗವಾಗಿ ಇಲ್ಲಿನ ವಿಜಯನಗರ 4ನೇ ಹಂತ ಬಳಿಯ ಎಸ್‌ಬಿಐ ಆಫೀಸರ್ಸ್‌ ಲೇಔಟ್‌ನಲ್ಲಿ 100 ಸಸಿಗಳನ್ನು ನೆಡಲಾಯಿತು.

ಸಂಸ್ಥೆಯ ತೇಜಸ್ವಿನಿ ಅನಂತ್‌ಕುಮಾರ್ ಮಾತನಾಡಿ, ‘ಪರಿಸರ ಸಂರಕ್ಷಣೆ ಸಮಾಜಕ್ಕೆ ಅತ್ಯವಶ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ಆಗುತ್ತಿರುವ ಮಾಲಿನ್ಯ ಹಾಗೂ ಅನಾಹುತಗಳನ್ನು ತಪ್ಪಿಸಲು ಉತ್ತಮ ಪರಿಸರವನ್ನು ಸಂರಕ್ಷಿಸಬೇಕಿರುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.

ಜಿಎಸ್ಎಸ್ ಸಂಸ್ಥೆಯ ಶ್ರೀಹರಿ, ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಪ್ರಾಧ್ಯಾಪಕ ಶ್ರೀನಿವಾಸ್, ಬಿಜೆಪಿ ಮುಖಂಡ ಗೋಪಾಲ್ ರಾವ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಖಜಾಂಚಿ ವೆಂಕಟೇಶ್, ಎಸ್‌ಬಿಐ ಎಂಜಿಎಂ ಗುರುಪ್ರಸಾದ್ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.