ADVERTISEMENT

ಒಕ್ಕಲಿಗರನ್ನು ಎಚ್‌ಡಿಕೆ ಗುತ್ತಿಗೆ ಪಡೆದಿದ್ದಾರೆಯೇ?: ಎಂ.ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 20:25 IST
Last Updated 23 ಜನವರಿ 2022, 20:25 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಒಕ್ಕಲಿಗ ಸಮುದಾಯವನ್ನು ಎಚ್‌.ಡಿ.ಕುಮಾರಸ್ವಾಮಿ ಗುತ್ತಿಗೆಗೆ ಪಡೆದಿದ್ದಾರೆದ್ದಾರೆಯೇ? ಒಕ್ಕಲಿಗರಲ್ಲಿಬೇರೆ ಮುಖಂಡರು ಬೆಳೆಯಲು ಅವಕಾಶವಿಲ್ಲವೇ?’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹರಿಹಾಯ್ದರು.

‘ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಟ್ವೀಟ್‌ಗಳನ್ನು ನೋಡಿದರೆ, ಅವರಿಗೆ ಮಾನಸಿಕ ಸಮತೋಲನ ತಪ್ಪಿದೆ ಎಂದೆನಿಸುತ್ತದೆ. ಅವರು ಕೀಳುಮಟ್ಟದ ಭಾಷೆ ಬಳಸುತ್ತಿರುವುದು ಸರಿಯಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಕುಮಾರಸ್ವಾಮಿ ಅವರೇ, ನಿಮ್ಮನ್ನು ನೀವು ಒಕ್ಕಲಿಗರ ಚಾಂಪಿಯನ್‌ ಅಂದುಕೊಂಡಿದ್ದರೆ ಆ ಭಾವನೆಯಿಂದ ಹೊರಬನ್ನಿ. ನಾವು ಆಪರೇಷನ್‌ ಹಸ್ತ ಮಾಡುತ್ತಿಲ್ಲ. ಒಕ್ಕಲಿಗ ಸಮುದಾಯದ ಮುಖಂಡರೇ ನಿಮ್ಮ ಪಕ್ಷ ತೊರೆದು ಬರುತ್ತಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.