ಸಂತೇಮರಹಳ್ಳಿ ಸಮೀಪದ ಉಮ್ಮತ್ತೂರು ಬಳಿ ಇರುವ ದಾಸನೂರು ಜಮೀನಿನಲ್ಲಿ ಹಾಕಲಾಗಿದ್ದ ಬೋನಿಗೆ ಚಿರತೆ ಬಿದ್ದಿರುವುದು
ಸಂತೇಮರಹಳ್ಳಿ: ಸಮೀಪದ ಉಮ್ಮತ್ತೂರು ಬಳಿ ಇರುವ ದಾಸನೂರು ಜಮೀನೊಂದರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಮಂಗಳವಾರ ಬಿದ್ದಿದೆ.
ಕುದೇರು, ತೊರವಳ್ಳಿ, ದಾಸನೂರು, ಉಮ್ಮತ್ತೂರು ಸುತ್ತಮುತ್ತಲ ಗ್ರಾಮಗಳಲ್ಲಿ 2 ವಾರಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಕುದೇರು ಗ್ರಾಮದ ನಾಗರಾಜು ಎಂಬುವರ ಜಮೀನಿನಲ್ಲಿ ಸಾಕಿದ ನಾಯಿ ಮೇಲೆ ದಾಳಿ ನಡೆಸಿ ನಾಯಿ ಮೃತಪಟ್ಟಿತು. ಈ ಹಿನ್ನೆಲೆಯಲ್ಲಿ ದಾಸನೂರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಇರುವ ಜಮೀನಿನಲ್ಲಿ ಚಾಮರಾಜನಗರ ಅರಣ್ಯ ಇಲಾಖೆ ವತಿಯಿಂದ ಬೋನ್ ಇಡಲಾಗಿತ್ತು.
ಸ್ಥಳಕ್ಕೆ ಚಾಮರಾಜನಗರದ ಡಿ.ಆರ್.ಎಫ್ಗಳಾದ ಗೌರಿಶಂಕರ್, ಚಂದ್ರಕುಮಾರ್, ಗಾರ್ಡ್ಗಳಾದ ಪೃಥ್ವಿರಾಜು, ಶ್ವೇತಾದ್ರಿ, ಸಿಬ್ಬಂದಿ ಕುಮಾರ್, ರೇವಣ್ಣ, ಮಹೇಶ್ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.