ADVERTISEMENT

ಗಾಂಜಾ ವಶ: ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 4:27 IST
Last Updated 16 ಅಕ್ಟೋಬರ್ 2020, 4:27 IST
ಹುಣಸೂರು ತಾಲ್ಲೂಕಿನ ಸಂತೆಕೆರೆ ಕೋಡಿ ಬಳಿ ಗುರುವಾರ ಬಂಧಿಸಿದ ಆರೋಪಿ ಹಾಗೂ ಗಾಂಜಾದೊಂದಿಗೆ ಪೊಲೀಸರು
ಹುಣಸೂರು ತಾಲ್ಲೂಕಿನ ಸಂತೆಕೆರೆ ಕೋಡಿ ಬಳಿ ಗುರುವಾರ ಬಂಧಿಸಿದ ಆರೋಪಿ ಹಾಗೂ ಗಾಂಜಾದೊಂದಿಗೆ ಪೊಲೀಸರು   

ಹುಣಸೂರು: ತಾಲ್ಲೂಕಿನ ಸಂತೆಕೆರೆ ಕೋಡಿ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮುಬಾರಕ್ ಎಂಬಾತನನ್ನು ಬಂಧಿಸಿದ್ದು, ಆತನಿಂದ 410 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರಲು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಉಪ ಆಯುಕ್ತರಾದ ಮಹಾದೇವಿ ಬಾಯಿ ಅಧಿಕಾರಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಾಚರಣೆಯಲ್ಲಿ ಅಬಕಾರಿ ಡಿವೈಎಸ್ಪಿ ಶ್ರೀನಿವಾಸ್‌, ನಿರೀಕ್ಷಣಾಧಿಕಾರಿ ಧರ್ಮರಾಜ್, ನಟರಾಜ್‌, ಮಂಜುನಾಥ್‌, ಅಜಯ್ ಕುಮಾರ್ ಮತ್ತು ಬಾಲಚಂದ್ರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.