ಮೈಸೂರು: ‘ಸಂಪುಟದಲ್ಲಿ ನನಗೂ ಸ್ಥಾನ ನೀಡಲು ಅವಕಾಶವಿದೆ. ಸ್ಥಾನ ಕೊಡುವ ಬಯಕೆಯೂ ಅವರಿಗಿದೆ. ಏನಾಗುತ್ತೆ ನೋಡೋಣ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
‘ಸಂಪುಟ ಪುನಾರಚನೆಯೋ, ವಿಸ್ತರಣೆಯೋ, ಅದು ಯಾವಾಗ ಆಗುತ್ತದೋ ಎಂಬುದು ಅಮಿತ್ ಶಾ, ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು' ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪರಿಪೂರ್ಣ ಸಂಪುಟ ರಚನೆಯಾಗಬೇಕು. ಜನರು ಮೆಚ್ಚುವಂತಹ ಮಂತ್ರಿ ಮಂಡಲ ಬೇಕು. ಆ ಮಂತ್ರಿ ಮಂಡಲ ಮತ್ತು ಪಕ್ಷದ ರಾಜ್ಯ ಸಮಿತಿಯು ಜತೆಯಾಗಿ ಕೆಲಸ ಮಾಡಬೇಕು ಎಂದರು.
17 ಮಂದಿ ಪಕ್ಷಾಂತರಿ ಶಾಸಕರು ಬಿಜೆಪಿ ಪಕ್ಷ ಕಟ್ಟಿಲ್ಲ ಎಂಬ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಜಕೀಯದ ಲೆಕ್ಕಾಚಾರ ಬೇರೆಯದೇ ಆಗಿರುತ್ತದೆ. ರಾಜಕೀಯ ಲೆಕ್ಕಾಚಾರದಲ್ಲಿ 51 ದೊಡ್ಡದೇ ಹೊರತು, 49 ದೊಡ್ಡದಲ್ಲ. ಅವರು ತಪ್ಪಿ ಮಾತನಾಡುತ್ತಾ ಇದ್ದಾರೆ ಎಂಬುದು ನನ್ನ ಅನಿಸಿಕೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.