ADVERTISEMENT

ಮೈಸೂರಿನ ಬೆಮಲ್ ಬಳಿ ಚಿರತೆ: ವೈರಲ್ ಆದ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 9:20 IST
Last Updated 16 ಡಿಸೆಂಬರ್ 2018, 9:20 IST
   

ಮೈಸೂರು: ನಗರದ ಹೆಬ್ಬಾಳದ ಬೆಮಲ್ ಕಾರ್ಖಾನೆಯ ಬಳಿ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕೆಳಗೆ ಬೀಳಿಸಿ ಕ್ಷಣಕಾಲ ಆತಂಕ ಮೂಡಿಸಿತು. ತಕ್ಷಣ ಅರಣ್ಯ ಇಲಾಖೆಗೆ ಸಾರ್ವಜನಿಕರು ಸುದ್ದಿ ಮುಟ್ಟಿಸಿದರು. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಕೆಲವರು ಸೆರೆ ಹಿಡಿದರು. ಸ್ವಲ್ಪ ಹೊತ್ತು ರಸ್ತೆಯಲ್ಲಿ ಕುಳಿತ ಚಿರತೆ ನಂತರ ಮುಳ್ಳುಗಂಟಿ ಗಿಡಗಳ ನಡುವೆ ಕಣ್ಮರೆಯಾಯಿತು‌.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ದೇವರಾಜು, 'ಬೆಮಲ್ ಸಮೀಪ ಚಿರತೆ ಇರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಾಕಷ್ಟು ಬಾರಿ ಇಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಪತ್ತೆಗೆ ಬೆಮಲ್ ಆವರಣದಲ್ಲಿ ಬೋನು ಇಡಲಾಗಿದೆ. ಮನುಷ್ಯರಿಗೆ ಚಿರತೆಗಳು ತೊಂದರೆ ಮಾಡುವುದಿಲ್ಲ. ಸಾರ್ವಜನಿಕರು ಭಯಗೊಳ್ಳಬಾರದು.' ಎಂದು ತಿಳಿಸಿದ್ದಾರೆ.

ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವ ಚಿತ್ರಗಳು ಚಾಮುಂಡಿಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.