ADVERTISEMENT

ಮೈಸೂರು | ನರಸಿಂಹರಾಜ ಕ್ಷೇತ್ರ: ಸಮುದಾಯಕ್ಕೆ ಕೋವಿಡ್‌ –ಸಚಿವ ಸೋಮಶೇಖರ್‌ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 8:16 IST
Last Updated 11 ಜುಲೈ 2020, 8:16 IST
ಎಸ್‌.ಟಿ. ಸೋಮಶೇಖರ್‌
ಎಸ್‌.ಟಿ. ಸೋಮಶೇಖರ್‌   

ನರಸಿಂಹರಾಜ ಕ್ಷೇತ್ರದಲ್ಲಿ ಸಮುದಾಯಕ್ಕೆ ಕೋವಿಡ್‌: ಸಚಿವ ಸೋಮಶೇಖರ್‌ ಆತಂಕ


ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸಮುದಾಯಕ್ಕೆ ಕೊರೊನಾ ಸೋಂಕು ಹರಡುವುದು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಆತಂಕ ವ್ಯಕ್ತಪಡಿಸಿದ್ದಾರೆ.

‌ಇದೇ ಕ್ಷೇತ್ರದಲ್ಲಿ ಸಾವಿನ ಪ್ರಕರಣಗಳೂ ಹೆಚ್ಚುತ್ತಿವೆ. ಆದರೆ, ಈ ಭಾಗದ ಜನರು ಸಮೀಕ್ಷೆ ನಡೆಸಲೂ ಅವಕಾಶ ನೀಡುತ್ತಿಲ್ಲ. ರ‍್ಯಾಂಡಮ್‌ ಪರೀಕ್ಷೆ ಮಾಡಲೂ ಬಿಡುತ್ತಿಲ್ಲ ಎಂದರು.

ADVERTISEMENT

ಹೀಗಾಗಿ, ಸ್ಥಳೀಯ ನಾಯಕರು, ಶಾಸಕರು, ಧಾರ್ಮಿಕ ಮುಖಂಡರ ಸಭೆ ನಡೆಸಿ ನರಸಿಂಹರಾಜ ಕ್ಷೇತ್ರವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡುವ ಬಗ್ಗೆ 2–3 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಪ್ರದೇಶದ 200 ಮೀಟರ್‌ ಅಂತರದಲ್ಲಿ ಕೋವಿಡ್‌–19ನಿಂದ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.