ಮೈಸೂರು: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಸಂಜೆ ನಗರದ ದಲಿತರ ಕೇರಿಯಲ್ಲಿ ಸಾಮರಸ್ಯದ ನಡಿಗೆ ನಡೆಸಿದರು.
ಪೂರ್ಣಕುಂಭ ಹೊತ್ತ ಮಹಿಳೆಯರು,ಬಾಲಕಿಯರು ಹಾದಿಯುದ್ದಕ್ಕೂ ಪುಷ್ಪಾರ್ಚನೆ ಮಾಡುತ್ತ ಸ್ವಾಮೀಜಿ ಜತೆ ಸಾಮರಸ್ಯ ನಡಿಗೆಯಲ್ಲಿ ಭಾಗಿಯಾದರು.
ಈಸಾಮರಸ್ಯ ನಡಿಗೆ ನಡೆಯುವಾಗ ತುಂತುರು ಮಳೆ ಆರಂಭವಾಯಿತು.ಮಳೆ ಬಿರುಸುಗೊಳ್ಳುತ್ತಿದ್ದಂತೆವಿಶ್ವೇಶತೀರ್ಥ ಸ್ವಾಮೀಜಿರಾಚಮ್ಮ-ಚೌಡಪ್ಪ ದಂಪತಿ ಮನೆ ಪ್ರವೇಶಿಸಿದರು.
ರಾಚಮ್ಮ-ಚೌಡಪ್ಪ ದಂಪತಿ ಸ್ವಾಮೀಜಿ ಅವರಿಗೆತುಳಸಿ ಮಾಲೆ ಅರ್ಪಿಸಿ,ಪಾದಪೂಜೆ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.