ADVERTISEMENT

‘ಲಿಂಗಾಧಾರಿತ ಪರಿಗಣನೆ ಬೇಡ’

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕೆ.ಸಿ.ದಿವ್ಯಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 7:34 IST
Last Updated 11 ಏಪ್ರಿಲ್ 2021, 7:34 IST
ಮೈಸೂರು ವಕೀಲರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ರಾಮಚಂದ್ರ ಡಿ. ಹುದ್ದಾರ್ ಉದ್ಘಾಟಿಸಿದರು. ಎಸ್.ಆನಂದಕುಮಾರ್, ಕೆ.ಸಿ.ದಿವ್ಯಶ್ರೀ, ಬಿ.ಆರ್.ಚಂದ್ರಮೌಳಿ, ಬಿ.ಶಿವಣ್ಣ, ಎಸ್.ಜಿ. ಶಿವಣ್ಣೇಗೌಡ ಇದ್ದಾರೆ
ಮೈಸೂರು ವಕೀಲರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ರಾಮಚಂದ್ರ ಡಿ. ಹುದ್ದಾರ್ ಉದ್ಘಾಟಿಸಿದರು. ಎಸ್.ಆನಂದಕುಮಾರ್, ಕೆ.ಸಿ.ದಿವ್ಯಶ್ರೀ, ಬಿ.ಆರ್.ಚಂದ್ರಮೌಳಿ, ಬಿ.ಶಿವಣ್ಣ, ಎಸ್.ಜಿ. ಶಿವಣ್ಣೇಗೌಡ ಇದ್ದಾರೆ   

ಮೈಸೂರು: ವ್ಯಕ್ತಿಯನ್ನು ಲಿಂಗಾಧಾರಿತವಾಗಿ ಗುರುತಿಸದೇ ಅವರ ವ್ಯಕ್ತಿತ್ವದಿಂದ ಗುರುತಿಸಬೇಕು ಎಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಬಳಕೆ ಮಾಡಿಕೊಳ್ಳಬೇಕು. ಆಗ ಎಂತಹುದೇ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು. ಸಿಕ್ಕಂತಹ ಅವಕಾಶಗಳನ್ನು ಬಿಡದೇ ಸವಾಲಾಗಿ ಸ್ವೀಕರಿಸಿ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಆತ್ಮವಿಶ್ವಾಸ ಇಮ್ಮಡಿಸುತ್ತದೆ ಎಂದರು.

ADVERTISEMENT

ಸಮಾನತೆ ಎಂಬುದು ಒಂದು ಸಾಮಾಜಿಕ ಮನಸ್ಥಿತಿಯಾಗಿದೆ. ಪುರುಷ ಮತ್ತು ಮಹಿಳೆಯ ನಡುವೆ ಸಮಾನತೆ ಬರಬೇಕಿದೆ ಎಂದು ಹೇಳಿದರು.

ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಂತೆ, ಯಶಸ್ವಿ ಮಹಿಳೆಯ ಹಿಂದೆಯೂ ಪುರುಷರ ಸಹಕಾರ ಇದ್ದೇ ಇರುತ್ತದೆ. ಆರೋಗ್ಯಕರ ಸಮಾಜದಲ್ಲಿ ಮಹಿಳೆ ಮತ್ತು ಪುರುಷರಿಬ್ಬರ ಪಾತ್ರವೂ ಅತಿ ಮುಖ್ಯ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಮಾತನಾಡಿ, ‘ಕೂಡು ಕುಟುಂಬದಲ್ಲಿರುವ ಸಂತೋಷ ಬೇರೆಲ್ಲೂ ಇಲ್ಲ. ಅತ್ತೆ, ಮಾವ, ನಾದಿನಿ ಇಲ್ಲದಿರುವ ಕುಟುಂಬಕ್ಕೆ ಹುಡುಗಿ ಕೊಡುತ್ತೇವೆ ಎಂಬುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ಆರ್.ಚಂದ್ರಮೌಳಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.