ಮೈಸೂರು: ನಗರದಲ್ಲಿ ಅರಮನೆ ಸುತ್ತಲಿನ ರಸ್ತೆಗಳಲ್ಲಿ ಅ.4ರವರೆಗೆ ರಾತ್ರಿ 9ರಿಂದ 11ರವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ದಸರಾ ಹಿನ್ನೆಲೆಯಲ್ಲಿ ಮಾಡಲಾಗಿರುವ ದೀಪಾಲಂಕಾರದ ವ್ಯವಸ್ಥೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡುವ ಸಂಬಂಧ ಜಯಚಾಮರಾಜೇಂದ್ರ ವೃತ್ತ–ಓಲ್ಡ್ ಸ್ಟ್ಯಾಚ್ಯೂ ಸರ್ಕಲ್–ಕೆ.ಆರ್.ವೃತ್ತ–ಕಾರ್ಪೊರೇಷನ್ ವೃತ್ತ–ಗನ್ ಹೌಸ್ ವೃತ್ತ–ಕುಸ್ತಿ ಆಖಾಡ ಜಂಕ್ಷನ್ ರಸ್ತೆಗಳನ್ನು ‘ವಾಹನ ರಹಿತ ವಲಯ’ ಎಂದು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.