ADVERTISEMENT

ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 2:44 IST
Last Updated 3 ಜನವರಿ 2021, 2:44 IST

ಪಿರಿಯಾಪಟ್ಟಣ: ತಾಲ್ಲೂಕಿನ ತಂದ್ರೆಗುಡಿ ಕೊಪ್ಪಲು ರೈತ ಮಲ್ಲೇಶ್ (52) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‌ಮಲ್ಲೇಶ್ ಅವರಿಗೆ ತಂದೆ ಹೆಸರಿನಲ್ಲಿ ಒಂದು ಎಕರೆ ಜಮೀನು ಇದೆ. ಸಹಕಾರ ಸಂಘದಲ್ಲಿ ₹30 ಸಾವಿರ ಹಾಗೂ ಟ್ರಾಕ್ಟರ್ ಖರೀದಿಗೆಖಾಸಗಿ ಬ್ಯಾಂಕ್‌ನಲ್ಲಿ ₹7 ಲಕ್ಷ ಸಾಲ ಮಾಡಿದ್ದರು. ನಿರೀಕ್ಷಿತ ಬೆಳೆ ಬರದಿದ್ದರಿಂದ ಶುಕ್ರವಾರ ಸಂಜೆ ಜಮೀನಿಗೆ ತೆರಳಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಜಮೀನಿಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಮೃತರ ಪತ್ನಿ ಸಾಕಮ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT