ಮೈಸೂರು: ‘ಕೆ.ಆರ್. ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಕೋವಿಡ್ ಕಾಲಘಟ್ಟದಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ದೂರಿದ್ದಾರೆ.
‘ಸರ್ಕಾರ, ಪಾಲಿಕೆಯ ಯೋಜನೆಗಳಿಗೆ ಮತ್ತೊಂದು ಹೆಸರು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೈಯಕ್ತಿಕವಾಗಿ ಯಾವೊಂದು ಸಹಾಯವನ್ನು ಕ್ಷೇತ್ರದ ಜನರಿಗೆ ಮಾಡುತ್ತಿಲ್ಲ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
‘ಜೂನ್ 21ರಿಂದ ಲಸಿಕೆ ಹಾಕಲಾಗುವುದು ಎಂದು ಮೋದಿಯೇ ಹೇಳಿದ್ದಾರೆ. ಪಾಲಿಕೆ ಆಡಳಿತ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದೆ. ಇವೆಲ್ಲವನ್ನೂ ತಮ್ಮದೇ ಸಾಧನೆ ಎಂಬಂತೆ ರಾಮದಾಸ್ ಬಿಂಬಿಸಿಕೊಳ್ಳುತ್ತಿದ್ದಾರಷ್ಟೇ. ಕ್ಷೇತ್ರದ ಜನರಿಗೆ ವೈಯಕ್ತಿಕವಾಗಿ ಯಾವೊಂದು ನೆರವು ನೀಡುತ್ತಿಲ್ಲ’ ಎಂದು ಮಲ್ಲೇಶ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.