ADVERTISEMENT

ವೇದಿಕೆ ಮೇಲೆ ರಘು ಸಾಷ್ಟಾಂಗ ನಮಸ್ಕಾರ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:45 IST
Last Updated 6 ಡಿಸೆಂಬರ್ 2021, 5:45 IST

ಮೈಸೂರು: ವಿಧಾನ ಪರಿಷತ್ತಿನ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಆರ್.ರಘು ಭಾನುವಾರ ಇಲ್ಲಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವೇದಿಕೆ ಮೇಲೆ ಮತದಾರರಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿ, ಮತ ಯಾಚಿಸಿದರು.

ಇದಕ್ಕೂ ಮುನ್ನ ಅವರು ಚಪ್ಪಲಿ ಕಳಚಿ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ, ‘ನನ್ನ ಆರಾಧ್ಯ ದೈವ ಯಡಿಯೂರಪ್ಪ’ ಎಂದರು.

‘ಜೆಡಿಎಸ್‌ ಎಲ್ಲಿ ಸ್ಪರ್ಧಿಸಿಲ್ಲವೋ ಅಲ್ಲಿ ಮಾತ್ರ ಆ ಪಕ್ಷದ ಬೆಂಬಲ ಕೋರಿದ್ದೇವೆ. ಮೈಸೂರು–ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್‌ ಜತೆ ಮೈತ್ರಿ ಇಲ್ಲ’ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.