ADVERTISEMENT

ಅತ್ಯಾಚಾರಿಗಳ ಎನ್‌ಕೌಂಟರ್‌ ಆಗಲಿ: ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 8:26 IST
Last Updated 28 ಆಗಸ್ಟ್ 2021, 8:26 IST
   

ಮೈಸೂರು: ‘ಸಾಮೂಹಿಕ ಅತ್ಯಾಚಾರ ಘಟನೆಯಿಂದ ಇಡೀ ಮೈಸೂರು ತಲೆತಗ್ಗಿಸುವಂತಾಗಿದ್ದು, ಅತ್ಯಾಚಾರಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಬೇಕು’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಂತಹ ಕಹಿ ಘಟನೆಗಳು ನಡೆದಾಗ ಎನ್‌ಕೌಂಟರ್ ಮಾಡುವ ದಿಟ್ಟತನವನ್ನು ಪೊಲೀಸರು ತೋರಿಸಬೇಕು. ಸರ್ಕಾರ ಕೂಡಾ ಆ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ಕೊಡಬೇಕು’ ಎಂದರು.

ಜಿಟಿಡಿ ನಮ್ಮ ಜತೆ ಇರುವ ವಿಶ್ವಾಸವಿದೆ: ‘ಜಿ.ಟಿ.ದೇವೇಗೌಡ ಅವರು ರಾಜಕೀಯದಲ್ಲಿ ಬಹಳ ವರ್ಷಗಳ ಅನುಭವ ಹೊಂದಿದ್ದು, ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಅರಿವು ಇದೆ. ಅವರು ಈಗಲೂ ನಮ್ಮ ನಾಯಕರು. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಎಲ್ಲ ಗೊಂದಲಗಳನ್ನು ಬಗೆಹರಿಸಿ, ಮನಸ್ಸನ್ನು ತಿಳಿಮಾಡಿಕೊಂಡು ಅವರು ನಮ್ಮ ಜತೆಯೇ ಇರುವ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.