ಎಚ್. ಡಿ.ಕೋಟೆ: ತಾಲ್ಲೂಕಿನ ಶಿರಮಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಶಾಲಾಕಟ್ಟಡ ಸಮೀಪದಲ್ಲಿದ್ದ ಎರಡು ಮನೆಗಳ ಮೇಲೆ ಬಿದ್ದು ಸಂಪೂರ್ಣ ನೆಲಸಮ ಆಗಿರುವ ಘಟನೆ ನಡೆದಿದೆ.
ಈ ಘಟನೆಯಿಂದ ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ 80 ವರ್ಷದ ಅಜ್ಜಿ ಪುಟ್ಟೀರಮ್ಮಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾಲಾಕಟ್ಟಡ ಶಿಥಿಲವಾಗಿದ್ದು ಅದನ್ನ ಅದನ್ನ ನೆಲಸಮ ಮಾಡುವಂತೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಈ ಹಿಂದೆಯೆ ಮನವಿ ನೀಡಿದ್ದರೂ ಸಹ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಇದರಿಂದಾಗಿ ನಮ್ಮ ಮನೆಗಳು ಸಂಪೂರ್ಣ ನೆಲಸಮವಾಗಿವೆ ಇದಕ್ಕೆ
ಹೊಣೆಯಾರು ಎಂದು ಗ್ರಾಮದ ಶಿವರಾಜ್ ಮನವಿ ಮಾಡಿದ್ದಾರೆ.
ಮನೆಯಲ್ಲಿ ಎಲ್ಲರೂ ಇದ್ದು ಪ್ರಾಣಹಾನಿ ಉಂಟಾಗಿದ್ದರೆ ಇದಕ್ಕೆ ಜವಾಬ್ದಾರಿ ಯಾರು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.