ಸರಗೂರು: ಇಲ್ಲಿನ 11ನೇ ವಾರ್ಡ್ನ ಬಿಡಗಲು ಡಾ. ಬಿ.ಆರ್.ಅಂಬೇಡ್ಕರ್ ಬೀದಿಯ ಕೊಟ್ಟಿಗೆಯಲ್ಲಿದ್ದ ಕುರಿಯನ್ನು ಬುಧವಾರ ರಾತ್ರಿ ಚಿರತೆ ಎಳೆದುಕೊಂಡು ಹೋಗಿ ತಿಂದುಹಾಕಿದೆ.
ಬಿಳಿತಾಯಮ್ಮ ಅವರ ಕೊಟ್ಟಿಗೆಯಲ್ಲಿ ಸುಮಾರು 15 ಕುರಿಗಳು ಇದ್ದವು. ಅದರಲ್ಲಿ ಒಂದು ಕುರಿಯನ್ನು ಚಿರತೆ ಎಳೆದುಕೊಂಡು ಹೋಗಿದೆ.
‘ಈ ಭಾಗದಲ್ಲಿ ಒಂದು ವಾರದಿಂದ ಚಿರತೆ ತಿರುಗಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬಿಜೆಪಿ ತಾಲ್ಲೂಕು ಘಟಕದ ಕಾರ್ಯದರ್ಶಿ ರಾಜು, ಶಿವಣ್ಣ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.