ADVERTISEMENT

ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ ರಾಜೀನಾಮೆ ಕೊಡಲಿ– ಎಬಿವಿಪಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:33 IST
Last Updated 10 ಜೂನ್ 2025, 15:33 IST
<div class="paragraphs"><p>ಎಬಿವಿಪಿ </p></div>

ಎಬಿವಿಪಿ

   

ಹುಣಸೂರು: ‘ಬೆಂಗಳೂರಿನಲ್ಲಿ  ಕಾಲ್ತುಳಿತ ಘಟನೆಗೆ ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ತಲೆದಂಡ ಮಾಡಿರುವುದು ಅವಿವೇಕದ ತೀರ್ಮಾನ’ ಎಂದು ಎಬಿವಿಪಿ ತಾಲ್ಲೂಕು ಘಟಕದ ಕಾರ್ಯಕಾರಣಿ ಸದಸ್ಯ ಶ್ರೀದತ್ತ ಆರೋಪಿಸಿದರು.

‘18 ವರ್ಷದ ಬಳಿಕ ಐಪಿಎಲ್ ಕಪ್‌ ಗೆದ್ದ ಆರ್.ಸಿ.ಬಿ ವಿಜಯೋತ್ಸವವನ್ನು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಭಾರಿ ಸಂಖ್ಯೆಯಲ್ಲಿ  ಜನ ಸೇರಿಸಿ ಆಚರಿಸಿದ್ದು ದುರಂತಕ್ಕೆ ಕಾರಣವಾಗಿದೆ ಎಂಬುದು ಹಲವು ವರದಿಗಳಿಂದ ಬೆಳಕಿಗೆ ಬಂದಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬೇಜವಾಬ್ದಾರಿತನದ ನಡವಳಿಕೆ, ಕೆಲವು ಅಧಿಕಾರಿಗಳ ತೀರ್ಮಾನದ ಫಲವಾಗಿ  ವಿದ್ಯಾರ್ಥಿಗಳು ಕಾಲ್ತುಳಿತಕ್ಕೆ ಬಲಿಯಾಗಬೇಕಾಯಿತು. ಈ ಸಾವಿಗೆ ಸರ್ಕಾರ ಪೂರ್ಣ ಜವಾಬ್ದಾರಿ ಹೊರಬೇಕಿದ್ದು,  ಹಲವು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜನರ ಕಣ್ಣೊರೆಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ.ಇದು  ತಲೆ ತಗ್ಗಿಸುವ ಸಂಗತಿ.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇತರರಿಗೆ ಮಾದರಿಯಾಗಬೇಕು  ಎಂದು ತಿಳಿಸಿದ್ದಾರೆ.

 11 ಯುವಕರ ಸಾವಿಗೆ ಎಬಿವಿಪಿ ಸಂತಾಪ ಸೂಚಿಸಿದ್ದು, ತಿಳಿಸಿ, ಗಾಯಗೊಂಡವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.