ADVERTISEMENT

ನಾಲೆಯಲ್ಲಿ ಮುಳುಗಿದ್ದ ವ್ಯಕ್ತಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:08 IST
Last Updated 4 ಅಕ್ಟೋಬರ್ 2020, 3:08 IST
ಶ್ರೀನಿವಾಸ್
ಶ್ರೀನಿವಾಸ್   

ವರುಣಾ: ಸಮೀಪದ ಚಿಕ್ಕಹಳ್ಳಿ ಬಳಿ ವರುಣಾ ಮುಖ್ಯ ಕಾಲುವೆಯಲ್ಲಿ ಶುಕ್ರವಾರ ಅವರ ತಂದೆಯ ಪಿಂಡ ಪ್ರದಾನ ಸಮಯದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದ ಮೈಸೂರು ಒಂಟಿಕೊಪ್ಪಲಿನ ನಿವಾಸಿ ಶ್ರೀನಿವಾಸ್ (41) ಅವರ ಮೃತದೇಹ ಶನಿವಾರ ಯಾಂದಹಳ್ಳಿ ಬಳಿ ಪತ್ತೆಯಾಗಿದೆ.

ವರುಣಾ ಠಾಣೆಯ ಎಸ್ಐ ಲಕ್ಷ್ಮೀ ಹಾಗೂ ಸಿಬ್ಬಂದಿ ರಾತ್ರಿಯಿಂದಲೇ ನಿಗಾ ವಹಿಸಿ ಎಲ್ಲಾ ಗ್ರಾಮಗಳಿಗೆ ಮಾಹಿತಿ ನೀಡಿದ್ದರು.

ವರುಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಈಜು ಪರಿಣಿತರು ಶನಿವಾರ ಸ್ಥಳಕ್ಕೆ ಧಾವಿಸಿ ಬೆಳಗಿನಿಂದ ಶೋಧನಾ ಕಾರ್ಯ ಆರಂಭಿಸಿದರು. ಕಾಲು ಜಾರಿ ಬಿದ್ದ ಸ್ಥಳದಿಂದ ಸುಮಾರು 5 ಕಿ.ಮೀ ದೂರದ ಯಾಂದಹಳ್ಳಿ ಸೇತುವೆ ಬಳಿ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಶವ ದೊರೆಯಿತು.

ADVERTISEMENT

ಶ್ರೀನಿವಾಸ್‌ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಮೃತ ದೇಹವು ಯಾಂದಹಳ್ಳಿ ಪತ್ತೆಯಾಗಿದ್ದರಿಂದ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರುಣಾ ಠಾಣೆಯ ಎಸ್ಐ ಲಕ್ಷ್ಮೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.