ಮೈಸೂರು: ಗ್ರ್ಯಾಂಡ್ಮಾಸ್ಟರ್ ಎಂ.ಎಸ್.ತೇಜ್ಕುಮಾರ್ ಅವರು ಮೈಸೂರು ಚೆಸ್ ಸೆಂಟರ್ ಆಶ್ರಯದಲ್ಲಿ ನಡೆದ ಎಂ.ಎನ್.ಕೃಷ್ಣರಾವ್ ಸ್ಮಾರಕ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಏಳು ಸುತ್ತುಗಳ ಲೀಗ್ನಲ್ಲಿ ಅವರು 6.5 ಪಾಯಿಂಟ್ ಪಡೆದರು. ತಮಿಳುನಾಡಿನ ರಾಮ್ ಎಸ್.ಕೃಷ್ಣನ್ ಕೂಡ ಇಷ್ಟೇ ಪಾಯಿಂಟ್ ಪಡೆದರು. ಆದರೆ, ಟೈಬ್ರೇಕ್ ಸ್ಕೋರ್ ಆಧಾರದ ಮೇಲೆ ತೇಜ್ ಮೊದಲ ಸ್ಥಾನ ಪಡೆದರು. ಬೆಂಗಳೂರಿನ ಜೆ.ಮಂಜುನಾಥ್ ಮೂರನೇ ಸ್ಥಾನ ಗಳಿಸಿದರು.
ವಿವಿಧ ವಿಭಾಗಗಳಲ್ಲಿ ಕೆ.ರಮೇಶ್, ಎಂ.ಎನ್.ಇಶಿತಾ, ಎಂ.ಎಚ್.ಯದ್ವಿತಿ, ಯಾಶಿಕಾ ಆರ್.ಜೋಶಿ, ಎಂ.ಎನ್.ಸ್ಪೂರ್ತಿ, ಪ್ರಸಿದ್ಧಿ ಭಟ್, ಯಾಶಿಕಾ ವಿಹಾನ್, ಜಿ.ಅಕ್ಷಯ್, ಪಿ.ಕಾರ್ತಿಕ್, ರಜತ್ ಗುರುರಾಜ್, ಪಿ.ದೀಪಕ್ ಮೊದಲ ಸ್ಥಾನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.