ADVERTISEMENT

ವೈಭವದ ಮದುವೆ ಬೇಕಿರಲಿಲ್ಲ: ಎಚ್.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 11:12 IST
Last Updated 25 ನವೆಂಬರ್ 2020, 11:12 IST
ಅಡಗೂರು ಎಚ್‌.ವಿಶ್ವನಾಥ್‌
ಅಡಗೂರು ಎಚ್‌.ವಿಶ್ವನಾಥ್‌   

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯೊಬ್ಬರು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಅದ್ದೂರಿ ವಿವಾಹ ಆಯೋಜಿಸಿದರು. ಇಂತಹ ವೈಭವದ ಮದುವೆಯ ಅಗತ್ಯ ಇರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಇಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರವೇ ಕಟ್ಟುಪಾಡುಗಳನ್ನು ಮಾಡಿ, ಸರ್ಕಾರದಲ್ಲಿರುವವರೇ ಅವುಗಳನ್ನು ಮುರಿಯುವುದು ಸರಿಯಲ್ಲ. ನಾನು ನನ್ನ ಎಲ್ಲ ಮಕ್ಕಳ ಮದುವೆಗಳನ್ನು ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದ್ದೇನೆ. ಯಡಿಯೂರಪ್ಪ ಅವರಿಗೂ ಮದುವೆ ಆಯೋಜಕರಿಗೂ ಇದು ಅರ್ಥವಾಗಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT