ADVERTISEMENT

ನಗರದಲ್ಲಿ ಉರುಳಿದ ಬೃಹತ್ ಮರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 11:32 IST
Last Updated 3 ಜೂನ್ 2020, 11:32 IST
ಮೈಸೂರಿನ ವಿದ್ಯಾರಣ್ಯಾಪುರಂನ 4ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿ ಮಂಗಳವಾರ ಸಂಜೆ ಬೃಹತ್ ಮರವೊಂದು ಉರುಳಿ ಬಿದ್ದಿರುವುದನ್ನು ಪಾಲಿಕೆ ಸದಸ್ಯ ಮ.ವಿ.ರವಿಪ್ರಸಾದ್ ವೀಕ್ಷಿಸಿದರು
ಮೈಸೂರಿನ ವಿದ್ಯಾರಣ್ಯಾಪುರಂನ 4ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿ ಮಂಗಳವಾರ ಸಂಜೆ ಬೃಹತ್ ಮರವೊಂದು ಉರುಳಿ ಬಿದ್ದಿರುವುದನ್ನು ಪಾಲಿಕೆ ಸದಸ್ಯ ಮ.ವಿ.ರವಿಪ್ರಸಾದ್ ವೀಕ್ಷಿಸಿದರು   

ಮೈಸೂರು: ಇಲ್ಲಿನ ವಿದ್ಯಾರಣ್ಯಾಪುರಂನ 4ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿ ಮಂಗಳವಾರ ಸಂಜೆ ಬೃಹತ್ ಮರ ಉರುಳಿ ಬಿದ್ದಿದೆ. ಮನೆಯೊಂದರ ಕಾಂಪೌಂಡ್ ಇದರಿಂದ ಜಖಂಗೊಂಡಿದೆ.

ಇದರ ಬೇರು ಶಿಥಿಲಾವಸ್ಥೆ ತಲುಪಿದ್ದರಿಂದ ಮರವು ಬಿದ್ದಿದೆ ಎಂದು ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ತಿಳಿಸಿದ್ದಾರೆ.

ಪಾಲಿಕೆ, ಸೆಸ್ಕ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ನಗರದಲ್ಲಿ ಅಪಾಯದಲ್ಲಿರುವ ಮರಗಳ ಸಮೀಕ್ಷೆ ಕಾರ್ಯ ನಡೆಸಬೇಕು. ಉರುಳುವ ಹಂತದ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಬಂದ ಅಭಯ್ ರಕ್ಷಣಾ ತಂಡವು ಮರವನ್ನು ತೆರವುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.