ಎಚ್.ಡಿ.ಕೋಟೆ: ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿಗಳ ಒಕ್ಕೂಟಗಳು ಇಲ್ಲಿ ನಡೆಸುತ್ತಿರುವ ಆದಿವಾಸಿಗಳ ಪ್ರತಿಭಟನೆ ಆರನೇ ದಿನವಾದ ಶನಿವಾರವೂ ಮುಂದುವರಿದಿದೆ.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಆದಿವಾಸಿ ಮುಖಂಡ ಶೈಲೇಂದ್ರ, ‘ನಮ್ಮ ಪ್ರತಿಭಟನೆಗೆ ಅಧಿಕಾರಿಗಳು ಯಾವುದೇ ರೀತಿಯ ಮನ್ನಣೆ ನೀಡದೇ ನಿರ್ಲಕ್ಷ್ಯಿಸಿದ್ದಾರೆ. ಹಾಗಾಗಿ ಎಚ್.ಡಿ.ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಆದಿವಾಸಿಗಳು ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವವರೆಗೂ ಇಲ್ಲಿಂದ ತೆರಳಬಾರದು’ ಎಂದು ಕರೆ
ನೀಡಿದರು.
ಪ್ರತಿಭಟನೆಯಲ್ಲಿ ಶೈಲೇಂದ್ರ, ಪುಟ್ಟಬಸವಯ್ಯ, ಮಹದೇವು, ಸಿದ್ದರಾಜು, ಅಯ್ಯಪ್ಪ, ಶಂಕರ್, ಕರಿಯಪ್ಪ, ಶಾಂತಿ, ಜಯಮ್ಮ, ಜಾನಕಮ್ಮ, ಸರಸು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.