ADVERTISEMENT

ಎಸ್‌ಎಫ್‌ಐ ಜಾಥಾಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:15 IST
Last Updated 12 ಆಗಸ್ಟ್ 2022, 15:15 IST
ಮೈಸೂರಿನ ಮಾನಸ ಗಂಗೋತ್ರಿಗೆ ಶುಕ್ರವಾರ ಆಗಮಿಸಿದ ಎಸ್ಎಫ್‌ಐ ಜಾಗೃತಿ ಜಾಥಾ ಸ್ವಾಗತ ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಧ್ಯಕ್ಷ ವಿ.ಪಿ.ಸಾನು ಮಾತನಾಡಿದರು
ಮೈಸೂರಿನ ಮಾನಸ ಗಂಗೋತ್ರಿಗೆ ಶುಕ್ರವಾರ ಆಗಮಿಸಿದ ಎಸ್ಎಫ್‌ಐ ಜಾಗೃತಿ ಜಾಥಾ ಸ್ವಾಗತ ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಧ್ಯಕ್ಷ ವಿ.ಪಿ.ಸಾನು ಮಾತನಾಡಿದರು   

ಮೈಸೂರು: ಶಿಕ್ಷಣ–ಸಂವಿಧಾನ–ದೇಶ ಉಳಿಸಿ ಎಂಬ ಘೋಷಣೆಯೊಂದಿಗೆ ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್‌ಎಫ್‌ಐ)ದಿಂದ ಹಮ್ಮಿಕೊಂಡಿರುವ ಅಖಿಲ ಭಾರತ ಜಾಥಾ ಶುಕ್ರವಾರ ಮೈಸೂರಿಗೆ ಆಗಮಿಸಿತು.

ಮಾನಸ ಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿ ಸ್ವಾಗತಿಸಲಾಯಿತು. ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಹಿರಂಗ ಸಭೆ ನಡೆಸಲಾಯಿತು.

ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ.ಸಾನು, ಜಂಟಿ‌ ಕಾರ್ಯದರ್ಶಿ ನಿತಿನ್ ನಾರಾಯಣ್, ರಂಗಕರ್ಮಿ ಜನಾರ್ಧನ್‌ (ಜನ್ನಿ), ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಮುಖಂಡರಾದ ಜಗದೀಶ್ ಸೂರ‌್ಯ, ಕೃಷ್ಣೇಗೌಡ, ಸಂಶೋಧಕ ಸಂಘಟನೆಯ ಮರಿದೇವಯ್ಯ, ಸೋಸಲೆ ಮಹೇಶ್, ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ವೀರಭದ್ರ, ಕವಿತಾ, ಭಾರತಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.