ADVERTISEMENT

ಮೆಸೆಜ್‌ ಕಳಿಸಿದ್ದಕ್ಕೆ ಬಿತ್ತು ಹೊಡೆತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 19:29 IST
Last Updated 9 ಡಿಸೆಂಬರ್ 2018, 19:29 IST

ಮೈಸೂರು: ಮಹಿಳೆಯೊಬ್ಬರಿಗೆ ಮೆಸೆಜ್ ಕಳಿಸಿದ್ದಕ್ಕೆ ಮಹಿಳೆ ಹಾಗೂ ಸೋದರರಿಬ್ಬರು ಸೇರಿ ಹೆಬ್ಬಾಳದ ನಿವಾಸಿ ಹೇಮಂತಕುಮಾರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.

ಹೇಮಂತ್‌ಕುಮಾರ್ ಮನೆ ಮುಂದೆ ಮಹಿಳೆ ಹಾಗೂ ಆಕೆಯ ಸೋದರ ಡಿ. 5ರಂದು ಬಂದು ಮೆಸೆಜ್‌ ಕಳಿಸಿದಕ್ಕೆ ಗಲಾಟೆ ಮಾಡಿದ್ದರು. ಈ ವೇಳೆ ಹೇಮಂತ್‌ಕುಮಾರ್ ತಂದೆ ಸಮಾಧಾನ ಮಾಡಿ ಕಳುಹಿಸಿದ್ದರು.

ಡಿ. 7ರ ರಾತ್ರಿ 12.30ರ ಸಮಯದಲ್ಲಿ ಮಹಿಳೆ ಮತ್ತು ಆಕೆಯ ಸೋದರ ಹೇಮಂತ್‍ಕುಮಾರ್ ಮನೆಗೆ ನುಗ್ಗಿ ಆತನನ್ನು ಬಲವಂತವಾಗಿ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೆಬ್ಬಾಳ ರಿಂಗ್‌ ರಸ್ತೆಯ ಕಡೆ ಹೋಗಿ, ರಾಜು ಅಪಾರ್ಟ್‍ಮೆಂಟ್‍ನ ಹಿಂಭಾಗದ ರಸ್ತೆಯಲ್ಲಿ ತಲೆ ಹಾಗೂ ಮುಖದ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞೆ ಕಳೆದುಕೊಂಡ ಹೇಮಂತ್‌ಕುಮಾರ್‌ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸದ್ಯ, ಹೇಮಂತ್‌ಕುಮಾರ್ ತಂದೆ ನಾಗರಾಜು ಮಹಿಳೆ ಹಾಗೂ ಆಕೆಯ ಸೋದರನ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.