ADVERTISEMENT

ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 11:34 IST
Last Updated 23 ಅಕ್ಟೋಬರ್ 2020, 11:34 IST

ಮೈಸೂರು: ಮನೆಯವರು ಮದುವೆ ಮಾಡುತ್ತಿಲ್ಲ ಎಂದು ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ಎರೆಕಟ್ಟೆ ಸ್ಟ್ರೀಟ್‌ನ ನಿವಾಸಿ ಅಸ್ಲಂ ಪಾಷ ಎಂಬುವರ ಪುತ್ರ ಮಹಮದ್ ಸಲ್ಮಾನ್ (22) ಎಂಬಾತನೇ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.

ಮದುವೆ ಮಾಡುವಂತೆ ಮಹಮದ್ ಸಲ್ಮಾನ್ ಹಲವು ಬಾರಿ ತನ್ನ ಪೋಷಕರಲ್ಲಿ ಒತ್ತಾಯಿಸಿದ್ದ. ಈತನ ಒತ್ತಾಯಕ್ಕೆ ಬೇಸತ್ತ ಪಾಲಕರು, ಕನ್ಯೆ ನೋಡಲು ಆರಂಭಿಸಿದ್ದರು.

ADVERTISEMENT

ಆದರೆ, ಈ ಮಧ್ಯೆ ಮನಸ್ಸು ಬದಲಾಯಿಸಿದ ಪೋಷಕರು ನಿನಗೆ ಇನ್ನು ವಯಸ್ಸು ಇದೆ. ಸದ್ಯಕ್ಕೆ ಮದುವೆ ಬೇಡ. ಮೊದಲು ಮನೆ ಕಟ್ಟಿ, ನಂತರ ಮದುವೆ ಮಾಡುತ್ತೇವೆ ಎಂದಿದ್ದಾರೆ. ಇದರಿಂದ ಮನನೊಂದ ಮಹಮದ್‌, ಮನೆಯಲ್ಲೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಸಲ್ಮಾನ್‌ ಪೋಷಕರು ದೂರು ನೀಡಿದ್ದಾರೆ ಎಂದು ಮಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.