ರಾಯಚೂರು: ಇಲ್ಲಿನ ರಾಜೇಂದ್ರ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಭಾನುವಾರ ನಡೆದ ಎತ್ತುಗಳಿಂದ ಎರಡು ಟನ್ ಭಾರದ ಕಲ್ಲು ಎಳೆಯುವ(ಅಖಿಲ ಭಾರತ ಮುಕ್ತ) ಸ್ಪರ್ಧೆ ನಡೆಯಿತು. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೆ.ಎನ್ ರಾವ್ ಎಂಬುವವರು ಎತ್ತುಗಳು 20ನಿಮಿಷಗಳಲ್ಲಿ 3004.6 ಅಡಿ ದೂರು ಎಳೆಯುವ ಮೂಲಕ ಪ್ರಥಮ ಸ್ಥಾನ 60 ಸಾವಿರ ರೂಪಾಯಿ ನಗದು ಬಹುಮಾನ ಪಡೆದುಕೊಂಡರು.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಗೀತಾಮೈತ ಚೌದರಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 3,000 ಅಡಿ ದೂರ ಎಳೆಯುವ ಮೂಲಕ ದ್ವಿತೀಯ ಸ್ಥಾನ 45 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಜಿಲ್ಲಾಲ ಗ್ರಾಮದ ಗೊಟಿಕ ನಾಗರೆಡ್ಡಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2,100 ಅಡಿ ದೂರ ಎಳೆಯುವ ಮೂಲಕ ತೃತೀಯ ಸ್ಥಾನ 35 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು.
ಆಂಧ್ರ ಪ್ರದೇಶದ ಮಹೆಬೂಬ್ನಗರ ಜಿಲ್ಲೆಯ ವನಪರ್ತಿ ಗ್ರಾಮದ ಜಂಗಡಿರಾಜು ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2,038.11 ಅಡಿ ದೂರ ಎಳೆಯುವ ಮೂಲಕ ತೃತೀಯ ಸ್ಥಾನ 25 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು. ಯಾದಗಿರು ಜಿಲ್ಲೆಯ ಕಡೆಕಲ್ ಗ್ರಾಮದ ರಾಜುಗೌಡ ಎಂಬುವವರ ಎತ್ತುಗಳು 20ನಿಮಿಷಗಳಲ್ಲಿ 1892.03 ಅಡಿ ದೂರು ಎಳೆಯುವ ಮೂಲಕ ಐದನೇ ಸ್ಥಾನ 20 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು.
ಮಲ್ದಕಲ್ ಗ್ರಾಮದ ಬಿ.ರಾಮುಲು ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 1830.06 ಅಡಿ ದೂರ ಎಳೆಯುವ ಮೂಲಕ ಆರನೇ ಸ್ಥಾನ 20ಸಾವಿರ ರೂಪಾಯಿಗಳ ನಗದು ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.