ADVERTISEMENT

ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 6:47 IST
Last Updated 1 ಫೆಬ್ರುವರಿ 2018, 6:47 IST

ಮಾನ್ವಿ: ‘ಸರ್ವರೂ ಶಾಂತಿ, ಸಹಬಾಳ್ವೆಯ ತತ್ವಗಳನ್ನು ಅಳವಡಿಸಿಕೊಂಡು ಬಾಳಿದರೆ ಏಳಿಗೆ ಕಾಣಲು ಸಾಧ್ಯ’ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಮಂಗಳವಾರ ಪಟ್ಟಣದ ಬಸವ ವೃತ್ತದಲ್ಲಿ ವಿವಿಧ ಪ್ರಗತಿಪರ ಸಂಘಟನಗಳು ಆಯೋಜಿಸಿದ್ದ ‘ಕರ್ನಾಟಕ ಕೋಮು ಸೌಹಾರ್ದಕ್ಕಾಗಿ ಮಾನವ ಸರಪಳಿ’ ಅಭಿಯಾನದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಕೋಮು ಸೌಹಾರ್ದತೆಯ ಮಹತ್ವ ಸಾರುವ ಪ್ರತಿಜ್ಞಾ ವಿಧಿ ಬೋಧಿಸಿದರು.

ADVERTISEMENT

ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮಾನವ ಸರಪಳಿ ರಚಿಸಿ ಕೋಮು ಸೌಹಾರ್ದದ ಪರವಾಗಿ ಘೋಷಣೆಗಳನ್ನು ಕೂಗಿದರು. ಅಭಿಯಾನದ ಸ್ಥಳೀಯ ಸಮಿತಿಯ ಸಂಚಾಲಕ ಎಚ್‌.ಶರ್ಪುದ್ದೀನ್‌ ಪೋತ್ನಾಳ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಅಕ್ಬರ್‌ ಪಾಷಾ ಗುತ್ತದಾರ, ಮಹಾಂತಪ್ಪಗೌಡ ಭೋಗಾವತಿ, ರಮೇಶಬಾಬು ಯಾಳಗಿ, ಮಹ್ಮದ್‌ ಮುಜೀಬ್‌, ಪಿ.ಪರಮೇಶ, ಡಿ.ಬಸನಗೌಡ, ಕೆ.ಈ.ನರಸಿಂಹ, ಬಿ.ವಿ.ರೆಡ್ಡಿ, ತಾಯಪ್ಪ ಬಿ.ಹೊಸೂರು, ಲಕ್ಷ್ಮಣ ಜಾನೇಕಲ್‌, ಸಿದ್ದಲಿಂಗಯ್ಯ, ಸಂಗಮೇಶ ಮಧೋಳ, ಬಂದೇನವಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.