ADVERTISEMENT

ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 12:58 IST
Last Updated 4 ಜುಲೈ 2021, 12:58 IST
ಸಿಂಧನೂರು ತಾಲ್ಲೂಕಿನ ರಾಮತ್ನಾಳ ಗ್ರಾಮದಲ್ಲಿ ಕೋವಿಡ್‍ನಿಂದ ಮೃತಪಟ್ಟ ರುದ್ರಪ್ಪಗೌಡ ಮತ್ತು ಅಮರಯ್ಯಸ್ವಾನಿ ಅವರ ಕುಟುಂಬದ ಸದಸ್ಯರಿಗೆ ಭಾನುವಾರ ಬಸನಗೌಡ ಬಾದರ್ಲಿ ಫೌಂಡೇಶನ್‍ನಿಂದ ₹ 5 ಸಾವಿರ ಪರಿಹಾರ ನೀಡಲಾಯಿತು
ಸಿಂಧನೂರು ತಾಲ್ಲೂಕಿನ ರಾಮತ್ನಾಳ ಗ್ರಾಮದಲ್ಲಿ ಕೋವಿಡ್‍ನಿಂದ ಮೃತಪಟ್ಟ ರುದ್ರಪ್ಪಗೌಡ ಮತ್ತು ಅಮರಯ್ಯಸ್ವಾನಿ ಅವರ ಕುಟುಂಬದ ಸದಸ್ಯರಿಗೆ ಭಾನುವಾರ ಬಸನಗೌಡ ಬಾದರ್ಲಿ ಫೌಂಡೇಶನ್‍ನಿಂದ ₹ 5 ಸಾವಿರ ಪರಿಹಾರ ನೀಡಲಾಯಿತು   

ಸಿಂಧನೂರು: ಇಲ್ಲಿನ ಪುನರ್ವಸತಿ ಕ್ಯಾಂಪ್ ನಂ.1, 4, 5, ರಾಗಲಪರ್ವಿ, ದಿದ್ದಿಗಿ, ರಾಮತ್ನಾಳ ಮತ್ತು ವಲ್ಕಮ್‍ದಿನ್ನಿ ಗ್ರಾಮಗಳಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಬಸನಗೌಡ ಬಾದರ್ಲಿ ಫೌಂಡೇಶನ್‍ನಿಂದ ಭಾನುವಾರ ತಲಾ ₹ 5 ಸಾವಿರದಂತೆ 9 ಕುಟುಂಬಗಳಿಗೆ ಧನಸಹಾಯ ನೀಡಿ ಬಸನಗೌಡ ಬಾದರ್ಲಿ ಸಾಂತ್ವನ ಹೇಳಿದರು.

ನಂತರ ದಿದ್ದಿಗಿಯ ಸಂತ್ರಸ್ತರ ಜೊತೆ ಮಾತನಾಡಿ, ‘ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ‘ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ಮುಖಂಡರಾದ ಹನುಮರೆಡ್ಡೆಪ್ಪಗೌಡ, ಮಲ್ಲನಗೌಡ ದಿದ್ದಿಗಿ, ನಾಗರಾಜ ರಾಮತ್ನಾಳ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.