ಸಿಂಧನೂರು: ಇಲ್ಲಿನ ಪುನರ್ವಸತಿ ಕ್ಯಾಂಪ್ ನಂ.1, 4, 5, ರಾಗಲಪರ್ವಿ, ದಿದ್ದಿಗಿ, ರಾಮತ್ನಾಳ ಮತ್ತು ವಲ್ಕಮ್ದಿನ್ನಿ ಗ್ರಾಮಗಳಲ್ಲಿ ಕೋವಿಡ್ನಿಂದ ಮೃತಪಟ್ಟ ಕುಟುಂಬಗಳಿಗೆ ಬಸನಗೌಡ ಬಾದರ್ಲಿ ಫೌಂಡೇಶನ್ನಿಂದ ಭಾನುವಾರ ತಲಾ ₹ 5 ಸಾವಿರದಂತೆ 9 ಕುಟುಂಬಗಳಿಗೆ ಧನಸಹಾಯ ನೀಡಿ ಬಸನಗೌಡ ಬಾದರ್ಲಿ ಸಾಂತ್ವನ ಹೇಳಿದರು.
ನಂತರ ದಿದ್ದಿಗಿಯ ಸಂತ್ರಸ್ತರ ಜೊತೆ ಮಾತನಾಡಿ, ‘ಕೋವಿಡ್ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ‘ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ಮುಖಂಡರಾದ ಹನುಮರೆಡ್ಡೆಪ್ಪಗೌಡ, ಮಲ್ಲನಗೌಡ ದಿದ್ದಿಗಿ, ನಾಗರಾಜ ರಾಮತ್ನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.