ಸಿರವಾರ: ಎನ್.ಎಸ್.ಭೋಸರಾಜು ಫೌಂಡೇಶನ್ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳು, ಸಿಬ್ಬಂದಿ, ಪೊಲೀಸ್ ಠಾಣೆ ಸಿಬ್ಬಂದಿ, ನಿರ್ಗತಿಕರು ಹಾಗೂ ಬಡವರಿಗೆ ಉಪಾಹಾರದ ಪೊಟ್ಟಣ ವಿತರಣೆ ಮಾಡಲಾಯಿತು.
ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,‘ಲಾಕ್ಡೌನ್ ಮುಗಿಯುವವರೆಗೂ ಉಪಾಹಾರದ ಪೊಟ್ಟಣ ವಿತರಣೆಗೆ ನಿರ್ಧರಿಸಲಾಗಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ, ರಮೇಶ ದರ್ಶನಕರ, ಎಸ್.ದಾನನಗೌಡ, ಗಣೇಕಲ್ ವೀರೇಶ, ಅರಿಕೇರಿ ಶಿವಶರಣ, ದೊಡ್ಡ ಪೀರಸಾಬ, ಚಿನ್ನಾನ ನಾಗರಾಜ, ಸೂರಿ ದುರುಗಣ್ಣ ನಾಯಕ, ವೆಂಕಟೇಶ ದೊರೆ, ಮೌಲಸಾಬ್ ವರ್ಚಸ್, ಮಹಿಬೂಬ್ ದೊಡ್ಮನಿ, ಹಸೇನಲಿಸಾಬ, ಮಹಿಬೂಬ್, ಅಮರೇಶ, ವೀರೇಶ ಗಡ್ಲ, ಹೆಚ್.ಕೆ ರಾಘು ಹಾಗೂ ಮಲ್ಲಿಕಾರ್ಜುನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.