ADVERTISEMENT

ಒಳ ಮೀಸಲಾತಿ ತೀರ್ಪು: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 14:18 IST
Last Updated 2 ಆಗಸ್ಟ್ 2024, 14:18 IST
ಕವಿತಾಳ ಪಟ್ಟಣದಲ್ಲಿ ಮುಖಂಡರು ಒಳ ಮೀಸಲಾತಿ ತೀರ್ಪು ಹಿನ್ನೆಲೆಯಲ್ಲಿ ಶುಕ್ರವಾರ ಅಂಬೇಡ್ಕರ್‌ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು
ಕವಿತಾಳ ಪಟ್ಟಣದಲ್ಲಿ ಮುಖಂಡರು ಒಳ ಮೀಸಲಾತಿ ತೀರ್ಪು ಹಿನ್ನೆಲೆಯಲ್ಲಿ ಶುಕ್ರವಾರ ಅಂಬೇಡ್ಕರ್‌ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು   

ಕವಿತಾಳ: ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮುಖಂಡರು ಶುಕ್ರವಾರ ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿ ಸಂಭ್ರಮಿಸಿದ ಮುಖಂಡರು ಪರಸ್ಪರ ಸಿಹಿ ಹಂಚಿದರು.

ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಲಿಂಗಪ್ಪ, ‘ಪರಿಶಿಷ್ಟ ಜಾತಿ, ಪಂಗಡದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹʼ ಎಂದರು.

ಮುಖಂಡರಾದ ಕರಿಯಪ್ಪ ಅಡ್ಡೆ, ಮರಿಯಪ್ಪ, ಈರಣ್ಣ ಕೆಳಗೇರಿ, ಹನುಮಂತ ಬುಳ್ಳಾಪುರ, ಮೌನೇಶ ಕೊಡ್ಲಿ, ಮಲ್ಲಪ್ಪ ಬಸಾಪುರ, ರಫಿ ಅನ್ವರಿ, ಯಾಕೂಬ, ಅರಳಪ್ಪ ತುಪ್ಪದೂರು, ಮೌನೇಶ ಕೊಡ್ಲಿ, ಓವಣ್ಣ, ಅಲ್ಲಮಪ್ರಭು, ಖಮರ್‌ ಸಾಬ, ನಾಗಪ್ಪ, ಮಹಾದೇವ, ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT
ಪಟ್ಟಣದಲ್ಲಿ ಮುಖಂಡರು ಒಳ ಮೀಸಲಾತಿ ತೀರ್ಪು ಹಿನ್ನೆಲೆಯಲ್ಲಿ ಶುಕ್ರವಾರ ಅಂಬೇಡ್ಕರ್‌ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.