ADVERTISEMENT

ಸಿಂಧನೂರು | ಗ್ರಾ.ಪಂಗಳಿಗೆ ಕೇಂದ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:32 IST
Last Updated 18 ಜುಲೈ 2025, 6:32 IST
<div class="paragraphs"><p>ಸಿಂಧನೂರು ತಾಲ್ಲೂಕಿನ ಆರ್.ಎಚ್.ಕ್ಯಾಂಪ್ ನಂ.1 ಗ್ರಾಮ ಪಂಚಾಯಿತಿ ಕಚೇರಿಗೆ ಕೇಂದ್ರ ಎಂಒಆರ್‌ಡಿ ತಂಡ ಗುರುವಾರ ಭೇಟಿ ನೀಡಿ ವಿವಿಧ ಯೋಜನೆ ಪ್ರಗತಿ ಪರಿಶೀಲನೆ ನಡೆಸಿತು</p></div><div class="paragraphs"></div><div class="paragraphs"><p><br></p></div>

ಸಿಂಧನೂರು ತಾಲ್ಲೂಕಿನ ಆರ್.ಎಚ್.ಕ್ಯಾಂಪ್ ನಂ.1 ಗ್ರಾಮ ಪಂಚಾಯಿತಿ ಕಚೇರಿಗೆ ಕೇಂದ್ರ ಎಂಒಆರ್‌ಡಿ ತಂಡ ಗುರುವಾರ ಭೇಟಿ ನೀಡಿ ವಿವಿಧ ಯೋಜನೆ ಪ್ರಗತಿ ಪರಿಶೀಲನೆ ನಡೆಸಿತು


   

ಸಿಂಧನೂರು: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ವಿವಿಧ ಯೋಜನೆ ಪ್ರಗತಿ ಪರಿಶೀಲನೆ ನಡೆಸಿತು.

ADVERTISEMENT

ತಾಲ್ಲೂಕಿನ ಆರ್.ಎಚ್.ಕ್ಯಾಂಪ್, ಎಲೆಕೂಡ್ಲಿಗಿ, ಮುಕ್ಕುಂದಾ ಪಂಚಾಯಿತಿಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಸೌಲಭ್ಯಗಳ ಫಲಾನುಭವಿಗಳ ಸಮೀಕ್ಷೆಯಲ್ಲಿ ವಸತಿ ಯೋಜನೆ ಫಲಾನುಭವಿಗಳ ಜತೆ ಮಾತನಾಡಿ ಕಡತ ಪರಿಶೀಲಿಸಿದರು.

ಅಂಗವಿಕಲರು, ವಿಧವೆಯರು ಹಾಗೂ ವೃದ್ಯಾಪ್ಯ ವೇತನ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತದೆಯೋ ಇಲ್ಲವೋ ಎಂದು ಫಲಾನುಭವಿಗಳನ್ನು ಖುದ್ದಾಗಿ ಕೇಳಿ ಮಾಹಿತಿ ಪಡೆದರು.

ನರೇಗಾ ಕೂಲಿ ಕಾರ್ಮಿಕರರೊಂದಿಗೆ ಮಾತನಾಡಿ, ಅನುಕೂಲಗಳು ಮತ್ತು ಸೌಲಭ್ಯಗಳು ವಿಚಾರಣೆ ಮಾಡಿದರು.

ಉದ್ಯೋಗ ಚೀಟಿಯನ್ನು ಪರಿಶೀಲಿಸಿ ಉದ್ಯೋಗದ ಮಾಹಿತಿ ನಮೂದಿಸಬೇಕು ಎಂದು ಸಿಬ್ಬಂದಿಗೆ ತಿಳಿಸಿದರು.

‘ನರೇಗಾ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಅಪಘಾತ ವಿಮೆ ₹2 ಲಕ್ಷದಿಂದ ₹5 ಲಕ್ಷದವರೆಗೆ ಹೆಚ್ಚಿಗೆ ಮಾಡಲಾಗಿದೆ’ ಎಂದು ಹೇಳಿದರು.

ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಮಾಜಿಕ ಅರಣ್ಯೀಕರಣ ಕಾಮಗಾರಿಯನ್ನು ಪರಿಶೀಲಿಸಿ ಸಸಿ  ನೆಟ್ಟು ನೀರೆರೆಲಾಯಿತು.

ಕೇಂದ್ರ ತಂಡದ ಯೋಜನಾ ನಿರ್ದೇಶಕರಾದ ರಮೇಶ ಬಾಬು, ಕೃಷ್ಣಕುಮಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸಹಾಯಕ ನಿರ್ದೇಶಕ ಅಮರಗುಂಡಪ್ಪ ಸೇರಿದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.