ADVERTISEMENT

ಕೋವಿಡ್‌ನಿಂದ ಸಾವು: ಕುಟುಂಬಗಳಿಗೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 16:27 IST
Last Updated 14 ಜುಲೈ 2021, 16:27 IST
ಚಿಕ್ಕಸೂಗೂರು ಗ್ರಾಮದಲ್ಲಿ ಕೋವಿಡ್‌ದಿಂದ ಮೃತಪಟ್ಟ ಸಂಬಂಧಿಗಳಿಗೆ ವೈಯಕ್ತಿಕ 5 ಸಾವಿರ ನಗದು ಮತ್ತು ಆಹಾರ ಕಿಟ್‌ ಅನ್ನು ಶಾಸಕ ಬಸನಗೌಡ ದದ್ದಲ್ ಅವರು ಮಂಗಳವಾರ ವಿತರಿಸಿದರು.
ಚಿಕ್ಕಸೂಗೂರು ಗ್ರಾಮದಲ್ಲಿ ಕೋವಿಡ್‌ದಿಂದ ಮೃತಪಟ್ಟ ಸಂಬಂಧಿಗಳಿಗೆ ವೈಯಕ್ತಿಕ 5 ಸಾವಿರ ನಗದು ಮತ್ತು ಆಹಾರ ಕಿಟ್‌ ಅನ್ನು ಶಾಸಕ ಬಸನಗೌಡ ದದ್ದಲ್ ಅವರು ಮಂಗಳವಾರ ವಿತರಿಸಿದರು.   

ಚಿಕ್ಕಸೂಗೂರು(ಶಕ್ತಿನಗರ): ಚಿಕ್ಕಸೂಗೂರು ಗ್ರಾಮದಲ್ಲಿ ಕೋವಿಡ್‌ದಿಂದ ಮೃತಪಟ್ಟ ಬಡ ಕುಟುಂಬದವರಿಗೆ ವೈಯಕ್ತಿಕವಾಗಿ ತಲಾ ₹5 ಸಾವಿರ ನಗದು ಮತ್ತು ಆಹಾರ ಕಿಟ್‌ ಅನ್ನು ಮಂಗಳವಾರ ಶಾಸಕ ಬಸನಗೌಡ ದದ್ದಲ್ ಅವರು ವಿತರಿಸಿದರು.

ನಂತರ ಮಾತನಾಡಿದ ಅವರು, ರಾಯಚೂರು ನಗರ ಮತ್ತು ಗ್ರಾಮೀಣ ಸೇರಿ 1200 ಜನ ಕೋವಿಡ್‌ದಿಂದ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಆದರೆ, ಜಿಲ್ಲಾಡಳಿತ 17 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಕೋವಿಡ್‌ದಿಂದ ಮೃತಪಟ್ಟ ಬಡ ಕುಟುಂಬದವರಿಗೆ ಪರಿಹಾರ ಸಿಗುವಂತಾಗಲಿ ಎಂದರು.

ದೇವಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ನರಸನಗೌಡ, ಮುಖಂಡ ಜಿ.ಶ್ರೀನಿವಾಸ, ಬಸವರಾಜ ವಕೀಲ, ಅಂಬಯ್ಯಗೌಡ ಮತ್ತಿತ್ತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.