ADVERTISEMENT

ಕಾರ್ಖಾನೆಯಲ್ಲಿ ಬೆಂಕಿ: ಕೋಟಿ ಮೌಲ್ಯದ ಹತ್ತಿ ಭಸ್ಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 11:04 IST
Last Updated 16 ಫೆಬ್ರುವರಿ 2021, 11:04 IST
   

ರಾಯಚೂರು: ನಗರದ ಹೈದರಾಬಾದ್ ಮಾರ್ಗದಲ್ಲಿರುವ ಮೆ.ಬಲ್ವಂತ್ ಇಂಡಸ್ಟ್ರೀಸ್ ಹತ್ತಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ.

ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಒಂದು ಕೋಟಿ ರೂ. ಮೌಲ್ಯ ಹತ್ತಿ ಸುಟ್ಟು ಭಸ್ಮವಾಗಿದೆ.

250 ಕ್ವಿಂಟಲ್ ಹತ್ತಿ ಅರಳೆ ಮತ್ತು 8 ಸಾವಿರ ಕ್ವಿಂಟಲ್ ಹತ್ತಿ ಕಾಳು ಸುಟ್ಟಿವೆ ಎಂದು ಕಾರ್ಖಾನೆ ಮಾಲೀಕ ಶ್ರೇಣಿಕರಾಜ ಮೂಥಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.