ಮುದಗಲ್: ಸಮೀಪದ ಮಟ್ಟೂರು ಗ್ರಾಮದಲ್ಲಿ ಹಜರತ್ ದಾವಲ್ ಮಲ್ಲಿಕ್ ಉರುಸ್ ಬುಧುವಾರ ರಾತ್ರಿ ಜರುಗಿತು.
ಸಾವಿರಾರು ಭಕ್ತರೊಂದಿಗೆ ಫಾತೇಹಾ ದೇವರ ಮನೆಯಲ್ಲಿ ಕಳಶ ಪ್ರತಿಷ್ಠಾಪಿಸಲಾಯಿತು. ಮಧ್ಯರಾತ್ರಿ ದೇವರ ಮನೆಯಿಂದ ದಾವಲ್ ಮಲ್ಲಿಕ್ ದರ್ಗಾದವರಗೆ ಕಳಶದ ಮೆರವಣೆಗೆ ನಡೆಯಿತು. ಗಂಧ ಮತ್ತು ಕಳಸಾರೋಹಣ ಜರುಗಿತು. ರಾತ್ರಿ ನಡೆದ ಕಳಶ ಮೆರವಣೆಗೆಯಲ್ಲಿ 30 ಕ್ವಿಂಟಲ್ ಕೊಬ್ಬರಿ ಸುಡಲಾಯಿತು.
ರಾಜಕೀಯ ಮುಖಂಡರು ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.