ತುಂಗಭದ್ರಾ (ರಾಯಚೂರು): ತಾಲ್ಲೂಕಿನ ತುಂಗಭದ್ರಾ ಗ್ರಾಮದ ರಾಮರಾವ್ ಕ್ಯಾಂಪ್ ಶಾಲೆಯಿಂದ ಆಹಾರಧಾನ್ಯ ತರಲು ಮನೆಯಿಂದ ಹೋಗಿದ್ದ 5ನೇ ತರಗತಿಯ ಇಬ್ಬರು ಬಾಲಕರು ಶುಕ್ರವಾರ ರಾಜಲಬಂಡಾ ಕಾಲುವೆ ಪಾಲಾಗಿದ್ದಾರೆ.
ಒಂದು ಶವ ಶನಿವಾರ ಪತ್ತೆಯಾಗಿದೆ.ಇನ್ನೊಂದು ಶವಕ್ಕಾಗಿ ಶೋಧ ಮುಂದುವರಿಸಲಾಗಿದೆ.
ಪ್ರವೀಣ್ (11) ಶವ ಪತ್ತೆಯಾಗಿದೆ. ಚಿನ್ನ ಬಾಲಕನ ಶವಕ್ಕಾಗಿ ಹುಡುಕಾಟ ನಡೆದಿದೆ.
ಶುಕ್ರವಾರ ಮಕ್ಕಳು ಕಣ್ಮರೆಯಾಗಿದ್ದರಿಂದ ಪಾಲಕರು ಮತ್ತು ಸಂಬಂಧಿಗಳು ಗಾಬರಿಯಿಂದ ಹುಡುಕಾಟ ಆರಂಭಿಸಿದ್ದರು. ಕಾಲುವೆಯಲ್ಲಿ ಶನಿವಾರ ಶವ ಪತ್ತೆಯಾಗುತ್ತಿದ್ದಂತೆ ರೋದನ ಮುಗಿಲುಮುಟ್ಟಿತು. ಇಡುಪನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.