ಹಟ್ಟಿಚಿನ್ನದ ಗಣಿ (ರಾಯಚೂರು): ಜೋಳದ ಒಣ ಸೊಪ್ಪು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೆಂಕಿ ಹೊತ್ತಿಕೊಂಡು ಊರಿದುಹೋದ ಘಟನೆ ಲಿಂಗಸುಗೂರು ತಾಲ್ಲೂಕಿನ ಗೌಡೂರು ಬಳಿ ಬುಧವಾರ ನಡೆದಿದೆ.
ಬಂಡೆಬಾವಿ ಗ್ರಾಮದ ರೈತ ರಮೇಶ ಗುಡ್ಡಕಾಯೋರು ಅವರು ಬಿಳಿಜೋಳದ ಒಣ ಸೊಪ್ಪು ತುಂಬಿಕೊಂಡು ಗೌಡೂರು ಕಡೆಯಿಂದ ಬಂಡೇಬಾವಿಗೆ ತರುತ್ತಿದ್ದರು. ಮಾರ್ಗದ ಮಧ್ಯ ಗೌಡೂರು ತಾಂಡಾದ ರಸ್ತೆಯಲ್ಲಿ ಸೊಪ್ಪಿನ ರಾಶಿಗೆ ವಿದ್ಯುತ್ ತಂತಿಗಳು ತಗುಲಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಂಜಿನ್ ಪ್ರತ್ಯೇಕಗೊಳಿಸಲಾಗಿದೆ.
ಲಿಂಗಸುಗೂರಿನಿಂದ ಅಗ್ನಿಶಾಮಕದಳದ ವಾಹನ ಬರುವಷ್ಟರಲ್ಲಿ ಸುಟ್ಟು ಕರಕಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.