ADVERTISEMENT

ರಾಯಚೂರು: ವಿದ್ಯುತ್ ಸ್ಪರ್ಶ, ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 7:00 IST
Last Updated 27 ಸೆಪ್ಟೆಂಬರ್ 2019, 7:00 IST
ಶಾಲೆ ಚಾವಣಿ ಸಮೀಪ ಹಾದುಹೋಗಿರುವ ವಿದ್ಯುತ್ ತಂತಿ (ಒಳಚಿತ್ರದಲ್ಲಿ ಮೃತ ಬಾಲಕ).
ಶಾಲೆ ಚಾವಣಿ ಸಮೀಪ ಹಾದುಹೋಗಿರುವ ವಿದ್ಯುತ್ ತಂತಿ (ಒಳಚಿತ್ರದಲ್ಲಿ ಮೃತ ಬಾಲಕ).   

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಬಸಾಪುರದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ 5ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಅನಿಲಕುಮಾರ ತಿಮ್ಮಪ್ಪ (11) ಮೃತ ಬಾಲಕ.ಸರ್ಕಾರಿ ಶಾಲೆಯ ಕೋಣೆಗಳ ಮೇಲೆ ಮಳೆ ನೀರು ಸಂಗ್ರಹವಾಗಿತ್ತು. ಚಾವಣಿ ಸ್ವಚ್ಛ ಮಾಡಲು ಬಾಲಕ ತೆರಳಿದ್ದ. ಈ ವೇಳೆ ಕೈಗೆಟುಕುವಂತಿದ್ದ ವಿದ್ಯುತ್ ತಂತಿ ಸ್ಪರ್ಶವಾಯಿತು.

ವಿದ್ಯುತ್ ಆಘಾತದಿಂದಅಸ್ವ‌ಸ್ಥವಾಗಿದ್ದ ವಿದ್ಯಾರ್ಥಿಯನ್ನು ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.