ADVERTISEMENT

ರಾಯಚೂರಿನಲ್ಲಿ ಅಪಘಾತ: ಎಂಜಿನಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 10:02 IST
Last Updated 18 ಜನವರಿ 2020, 10:02 IST
ಶಕ್ತಿನಗರ ಬಳಿಯ ಚಿಕ್ಕಸೂಗೂರಿನ ವೈಟಿಪಿಎಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು
ಶಕ್ತಿನಗರ ಬಳಿಯ ಚಿಕ್ಕಸೂಗೂರಿನ ವೈಟಿಪಿಎಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು   

ಶಕ್ತಿನಗರ: ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಕಲ್ಲಿದ್ದಲು ಸ್ಟಾಕರ್ ವಿಭಾಗದ ಹತ್ತಿರ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರೊಮೇಕ್ ಕಂಪನಿಯ ಎಂಜಿನಿಯರ್ ನಿಂಗಬಸಪ್ಪ ತಳವಾರ (52) ಮೃತಪಟ್ಟಿದ್ದಾರೆ.

ನಿಂಗಬಸಪ್ಪ ವಿಜಯಪುರದವರು. ಸುದರ್ಶನ ಮತ್ತು ಶಿವಕುಮಾರ ಅವರು ಗಾಯಗೊಂಡಿದ್ದು, ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.

ಕಲ್ಲಿದ್ದಲು ಸ್ಟಾಕರ್ ವಿಭಾಗದ ರಸ್ತೆ ಬದಿಯಲ್ಲಿ ಹೈಡ್ರೋಕ್ರೇನ್ ನಿಲ್ಲಿಸಲಾಗಿತ್ತು. ಅತಿವೇಗದಿಂದ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ಶಿವಕುಮಾರ ಅವರು, ನಿಂತಿದ್ದ ಹೈಡ್ರೋಕ್ರೇನ್‌ಗೆ ಡಿಕ್ಕಿ ಹೊಡೆದಿದ್ದಾರೆ.

ADVERTISEMENT

ಕಾರಿನ ಮುಂಭಾಗದಲ್ಲಿ ಕುಳಿತಿದ್ದ ನಿಂಗಬಸಪ್ಪ ತಳವಾರ ಅವರ ತಲೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ರಿಮ್ಸ್‌ ಆಸ್ಪತ್ರೆಗೆ ದಾಖಲಿಸಿ, ನಂತರ ರಾಯಚೂರು ನಗರದ ಸುರಕ್ಷಾ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ನಿಂಗಬಸಪ್ಪ
ಮೃತಪಟ್ಟಿದ್ದಾರೆ.

ಪ್ರೊಮೇಕ್ ಕಂಪನಿಯ ಸಹಾಯಕ ಎಂಜಿನಿಯರ್ ಬಸವರಾಜ ಹರಳ್ಳಿ ಅವರು ಈ ಬಗ್ಗೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.