ರಾಯಚೂರು: ಅತಿವೃಷ್ಟಿಯಿಂದ ಹಾನಿ ಅನುಭವಿಸಿರುವ ರಾಯಚೂರು ತಾಲ್ಲೂಕಿನ ಮೂರು ಸಾವಿರ ಕುಟುಂಬಗಳಿಗೆ ಇನ್ಫೋಸಿಸ್ ಫೌಂಡೇಷನ್ನಿಂದ ದಿನಸಿ ಕಿಟ್ಗಳನ್ನು ವಿತರಿಸಲಾಗುತ್ತಿದೆ.
ರೆಡ್ಕ್ರಾಸ್ ಸಂಸ್ಥೆ, ಸ್ವಾಮಿ ವಿವೇಕಾನಂದ ಆಶ್ರಮ ಸಹಯೋಗದಲ್ಲಿ ಇಡಪನೂರು, ಪಿಡಗಲದಿನ್ನಿ, ತಲಮಾರಿ, ಮಿರ್ಜಾಪೂರ, ಮೀರಾಪೂರ, ಗುಂಜಳ್ಳಿ, ಜಂಬಲದಿನ್ನಿ, ಗೋನವಾರ ಹಾಗೂ ರಾಯಚೂರು ನಗರದ ವಿವಿಧ ಬಡಾವಣೆಯಲ್ಲಿರುವ ಕುಟುಂಬಗಳಿಗೆ ಕಿಟ್ಗಳನ್ನು ತಲುಪಿಸಲಾಗುತ್ತಿದೆ ಎಂದು ರಾಮಕೃಷ್ಣ ಆಶ್ರಮ ಜಪಾನಂದ ಸ್ವಾಮಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಲು ಆಹಾರಧಾನ್ಯ, ಬಟ್ಟೆಗಳು, ಪಾತ್ರೆಗಳು, ಹೊದಿಕೆಗಳು, ಮನೆಗೆ ತಾಡಪಾಲ್ಗಳನ್ನು ಎರಡು ಲಾರಿಗಳಲ್ಲಿ ತರಲಾಗಿದೆ. ಮನೆ ಕಳೆದುಕೊಂಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯೂ ಇದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.