ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಬಲ್ಲಟಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಕ್ಕಳಿಬ್ಬರು ಹೊಂಡವೊಂದರಲ್ಲಿ ಶವವಾಗಿ ಸೋಮವಾರಪತ್ತೆಯಾಗಿದ್ದಾರೆ.
ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಕಿರಿಯ ಪುತ್ರ ಶಿವಾನಂದರ ಮಕ್ಕಳಾದವರುಣ ನಾಯಕ (11), ತನಯ ನಾಯಕ (5) ಮೃತರಾಗಿದ್ದಾರೆ.
ಆಟವಾಡಲು ಮನೆಯಿಂದ ಹೊರಹೋಗಿದ್ದ ಇಬ್ಬರು ಬಾಲಕರು ಸಂಜೆಯಾದರೂ ಹಿಂತಿರುಗಿ ಬಂದಿರಲಿಲ್ಲ. ಭಾನುವಾರ ಸಂಜೆಯಿಂದ ಮನೆಯವರು ಗಾಬರಿಯಾಗಿ ಎಲ್ಲ ಕಡೆಗೂ ಹುಡುಕಾಟ ಆರಂಭಿಸಿದ್ದರು.
ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.