ADVERTISEMENT

ರಾಯಚೂರು: ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 10:30 IST
Last Updated 8 ಮಾರ್ಚ್ 2021, 10:30 IST
ವರುಣ ನಾಯಕ, ತನಯ ನಾಯಕ
ವರುಣ ನಾಯಕ, ತನಯ ನಾಯಕ   

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಬಲ್ಲಟಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಕ್ಕಳಿಬ್ಬರು ಹೊಂಡವೊಂದರಲ್ಲಿ ಶವವಾಗಿ ಸೋಮವಾರಪತ್ತೆಯಾಗಿದ್ದಾರೆ.

ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಕಿರಿಯ ಪುತ್ರ ಶಿವಾನಂದರ ಮಕ್ಕಳಾದವರುಣ ನಾಯಕ (11), ತನಯ ನಾಯಕ (5) ಮೃತರಾಗಿದ್ದಾರೆ.

ಆಟವಾಡಲು ಮನೆಯಿಂದ ಹೊರಹೋಗಿದ್ದ ಇಬ್ಬರು ಬಾಲಕರು ಸಂಜೆಯಾದರೂ ಹಿಂತಿರುಗಿ ಬಂದಿರಲಿಲ್ಲ. ಭಾನುವಾರ ಸಂಜೆಯಿಂದ ಮನೆಯವರು ಗಾಬರಿಯಾಗಿ ಎಲ್ಲ ಕಡೆಗೂ ಹುಡುಕಾಟ ಆರಂಭಿಸಿದ್ದರು.

ADVERTISEMENT

ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.