ADVERTISEMENT

ರಾಯಚೂರು: 5 ವರ್ಷದ ಮಗು ಸೇರಿ ಐದು ಜನರ ಮೇಲೆ ತೋಳ ದಾಳಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 13:22 IST
Last Updated 28 ಅಕ್ಟೋಬರ್ 2020, 13:22 IST
   

ಕವಿತಾಳ (ರಾಯಚೂರು ಜಿಲ್ಲೆ): ಮಸ್ಕಿ ತಾಲ್ಲೂಕಿನ ಇಲಾಲಾಪುರ ಗ್ರಾಮದಲ್ಲಿ ಹಗಲೇ ತೋಳ ದಾಳಿ ಮಾಡಿದ್ದು 5 ವರ್ಷದ ಮಗು ಸೇರಿದಂತೆ ಐದು ಜನರನ್ನು ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಲಿಂಗಸುಗೂರು ಮತ್ತು ಮಸ್ಕಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಗ್ರಾಮದ ಶಿವಪ್ಪ ಕುರುಬರ, ದಯಾನಂದರೆಡ್ಡಿ, ಅಭಿಷೇಕ, ಸಮರ್ಥ ಮತ್ತು ಮೀನಾಕ್ಷಿ ಗಾಯಗೊಂಡಿದ್ದಾರೆ.

ಗ್ರಾಮದ ಅಗಸಿ ಹತ್ತಿರದ ಮನೆ ಮುಂದೆ ಕುಳಿತಿದ್ದವರ ಮೇಲೆ ತೋಳ ದಾಳಿ ಮಾಡಿದೆ. ಸೈಕಲ್ ಓಡಿಸುತ್ತಿದ್ದ ಅಭಿಷೇಕನನ್ನು ಅಟ್ಟಿಸಿಕೊಂಡು ಹೋಗಿ ಕಚ್ಚಿದ್ದು ತೀವ್ರ ಗಾಯಗಳಾಗಿವೆ. ಸಾರ್ವಜನಿಕರು ತೋಳವನ್ನು ಓಡಿಸಿದ್ದು ಬೆಂಚಮರಡಿ ಗ್ರಾಮದ ಕಡೆ ಹೋಗಿದ್ದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬೆಂಚಮರಡಿ ಗ್ರಾಮಸ್ಥರು ಬಡಿಗೆ ಬೆತ್ತಗಳನ್ನು ಹಿಡಿದು ಕಾಯ್ದು ಕುಳಿತು ತೋಳದ ಮೇಲೆ ದಾಳಿ ಮಾಡಿ ಸಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.