ADVERTISEMENT

ರಾಯಚೂರಿನಲ್ಲಿ 1.6 ಕೆ.ಜಿ ಗಾಂಜಾ ಜಪ್ತಿ, ಬಂಧನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 12:45 IST
Last Updated 18 ಸೆಪ್ಟೆಂಬರ್ 2020, 12:45 IST
ಶಕ್ತಿನಗರ ಬಳಿಯ ಡಿ.ರಾಂಪುರ ಸೀಮಾಂತರದ ಜಮೀನೊಂದರಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಯಾಪಲದಿನ್ನಿ ಪೊಲೀಸರು ಬಂಧಿಸಿದ್ದಾರೆ
ಶಕ್ತಿನಗರ ಬಳಿಯ ಡಿ.ರಾಂಪುರ ಸೀಮಾಂತರದ ಜಮೀನೊಂದರಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಯಾಪಲದಿನ್ನಿ ಪೊಲೀಸರು ಬಂಧಿಸಿದ್ದಾರೆ   

ಶಕ್ತಿನಗರ: ಯಾಪಲದಿನ್ನಿ ಠಾಣೆ ಪೊಲೀಸರು ಡಿ.ರಾಂಪುರ ಸಮೀಪದ ಜಮೀನಿನಲ್ಲಿ ಬೆಳೆದಿದ್ದ 1.6 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ.

ವಡ್ಡೆಪಲ್ಲಿ ಗ್ರಾಮದ ಭೀಮೇಶ(40) ಬಂಧಿತ.

‘ಡಿ.ರಾಂಪುರ ಸೀಮಾಂತರದಲ್ಲಿರುವ ಜಮೀನಿನ ಮೇಲೆ ದಾಳಿ ನಡೆಸಿದಾಗ ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಯಿತು. ಈ ಗಾಂಜಾ ಗಿಡಗಳ ಮೌಲ್ಯ ₹2,880 ಆಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಯಾಪಲದಿನ್ನಿ ಠಾಣೆಯ ಪಿಎಸ್‌ಐ ಕರೆಮ್ಮ ತಿಳಿಸಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಡಿವೈಎಸ್ಪಿ ಶಿವನಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು.

ತಂಡದಲ್ಲಿ ಸಿಬ್ಬಂದಿ ತಿಪ್ಪಣ್ಣ, ಪಂಪಾಪತಿ, ಗಂಗಪ್ಪ , ಬೂದೆಪ್ಪ , ಮಲ್ಲಯ್ಯ, ನಾಗರಾಜ, ಜಿಂದಪ್ಪ , ಮಲ್ಲಿಕಾರ್ಜುನ, ಶಂಕರ, ವಿನೋದಕುಮಾರ ಹಾಗೂ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.