ADVERTISEMENT

‘ಹಸಿರು ಲಿಂಗಸುಗೂರು’ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 12:58 IST
Last Updated 4 ಜುಲೈ 2021, 12:58 IST
ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಭಾನುವಾರ ಹಸಿರು ಲಿಂಗಸುಗೂರು ಸಮಿತಿ ಸದಸ್ಯರು ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಅಭಿಯಾನವನ್ನು ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು
ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಭಾನುವಾರ ಹಸಿರು ಲಿಂಗಸುಗೂರು ಸಮಿತಿ ಸದಸ್ಯರು ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಅಭಿಯಾನವನ್ನು ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು   

ಲಿಂಗಸುಗೂರು: ‘ಹಸಿರು ಲಿಂಗಸುಗೂರು’ ಸಮಿತಿ ಸದಸ್ಯರಿಂದ ಸ್ಥಳೀಯ ಬಸ್‍ ನಿಲ್ದಾಣ ಆವರಣದಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮ ಮೂಲಕ ಪ್ರಯಾಣಿಕರಲ್ಲಿ ಪರಿಸರ ಜಾಗೃತಿ ಅಭಿಯಾನ ನಡೆಸಲಾಯಿತು.

ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ಮಾತನಾಡಿ, ‘ಯುವಕರು ಸಮಿತಿ ರಚಿಸಿಕೊಂಡು ತಾಲ್ಲೂಕು ಕೇಂದ್ರದ ಪ್ರಮುಖ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಖುಷಿ ತಂದಿದೆ’ ಎಂದರು.

ಸಮಿತಿ ಹಿರಿಯ ಸದಸ್ಯ ಪ್ರಭುಸ್ವಾಮಿ ಅತ್ನೂರು ಮಾತನಾಡಿ, ‘ಹಸಿರು ಲಿಂಗಸುಗೂರು ಸಮಿತಿ ಸದಸ್ಯರು ಆರಂಭಿಕ ಹಂತವಾಗಿ 500 ಸಸಿಗಳನ್ನು ನೆಡುವ ಜೊತೆಗೆ ಅವುಗಳ ರಕ್ಷಣೆಗೆ ಮುಂದಾಗಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

ADVERTISEMENT

ಮುಖಂಡರಾದ ಭೀಮಶೇನ ಜೋಷಿ, ಸಂಜಯ ಹಿರೇಮಠ, ಮಲ್ಲಣ್ಣ ಕೆಂಭಾವಿ, ಚೆನ್ನಬಸವ ಹಿರೇಮಠ, ಅಮರೇಶ ಗಂಭೀರಮಠ, ಮಹಾಂತೇಶ ನರಕಲದಿನ್ನಿ, ಸುರೇಶ ಮೇಟಿ, ಆರ್‍.ಎಸ್‍ ಪಾಟೀಲ, ಮದನಮೋಹನ, ಸುಗೂರೇಶ ಸಾಲ್ಮನಿ, ಚೇತನ ಗುತ್ತೆದಾರ, ಕುಮಾರ ಭೋವಿ, ಚೇತನ, ಸಾರಿಗೆ ಸಂಸ್ಥೆ ನೌಕರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.